ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮಾರ್ಚ್ 19, 2012

ಬದುಕಿಗೆ ಹೆದರಿ ಓಡಿಹೋಗಬೇಡ - ವೇದಸುಧೆ » Vedasudhe

ಬದುಕು ಕದನವೆಂದಂಜಿ ಬಿಟ್ಟೋಡುವವನು
ವಿಧಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ ಮತಿಗದೆಯ ಪಿಡಿದು
ನೀ ನೆದುರು ನಿಲೆ ಬಿದಿಯೊಲಿವ ಮಂಕು ತಿಮ್ಮ|| 598||
     ಮನುಷ್ಯ ಹುಟ್ಟಿದಮೇಲೆ ಬದುಕು ನಡೆಸಲೇ ಬೇಕು. ಬೇರೆ ಗತಿಯಿಲ್ಲ. ಬದುಕನ್ನು ನಡೆಸಲಾರೆನೆಂದು ಅದಕ್ಕೆ ಅಂಜಿ ಓಡಿಹೋಗುತ್ತೇನೆಂದರೆ ವಿಧಿ ಬಿಟ್ಟೀತೇ? ಬದಲಿಗೆ ಬಂದ ಕಷ್ಟಕಾರ್ಪಣ್ಯಗಳಿಗೆ ಎದೆಯನ್ನು ಉಕ್ಕಿನಂತೆ ಗಟ್ಟಿಮಾಡಿಕೊಂಡು ತನ್ನ ಬುದ್ಧಿಎಂಬ ಗದೆಯನ್ನು ಹಿಡಿದುಕೊಂಡು ಆ ವಿಧಿಗೆ ಎದುರು ನಿಂತರೆ ಆ ವಿಧಿಯೂ ಕೂಡ ತಂತಾನೆ ಒಲಿಯುವುದು, ಆದ್ದರಿಂದ ಪಲಾಯನ ವಾದವನ್ನು ಎಂದಿಗೂ ಮಾಡಬೇಡ.
ಡಾ.ಗುರುರಾಜ ಕರ್ಜಗೆಯವರ ಧ್ವನಿಯಲ್ಲಿ ಈ ಪದ್ಯದ ವಿವರಣೆಯನ್ನು ಕೇಳಿ.
ಕೃಪೆ: ಕನ್ನಡ ಆಡಿಯೋ ಡಾಟ್ ಕಾಮ್
ಇಲ್ಲಿ ಕ್ಲಿಕ್ಕಿಸಿ:
ಬದುಕಿಗೆ ಹೆದರಿ ಓಡಿಹೋಗಬೇಡ - ವೇದಸುಧೆ » Vedasudhe

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ