ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ನವೆಂಬರ್ 24, 2011

ವೇದಾಂತವನ್ನು ಅಭ್ಯಸಿಸುವ ಮುನ್ನ

ಶ್ರೀ ಸೂರ್ಯ ಪ್ರಕಾಶ್ ಪಂಡಿತರು ಇಲ್ಲಿ ಆಡಿರುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬಹುದು.






-ಹರಿಹರಪುರ ಶ್ರೀಧರ್.

ಮಂಗಳವಾರ, ನವೆಂಬರ್ 22, 2011

'ಹೊಸಬೆಳಕು' ಮೂಡುತ್ತಿದೆ! -2

     ದಿನಾಂಕ 20-11-2011ರಂದು ಚಂದನ ದೂರದರ್ಶನದಲ್ಲಿ ಬೆ.9-30ಕ್ಕೆ  ಪ್ರಸಾರವಾದ 'ಹೊಸಬೆಳಕು' ಕಾರ್ಯಕ್ರಮವನ್ನು ಮಿತ್ರ ಹರಿಹರಪುರ ಶ್ರೀಧರರು ದ್ವನಿಮುದ್ರಿಸಿದ್ದು, ಅದನ್ನು ತಮ್ಮ ಶ್ರವಣಕ್ಕಾಗಿ ಇಲ್ಲಿ ಪ್ರಕಟಿಸಿದೆ.
ಅಭಿಪ್ರಾಯಗಳಿಗೆ ಸ್ವಾಗತ!
ಧ್ವನಿ: ಶ್ರೀ ಸುಧಾಕರ ಶರ್ಮ ಮತ್ತು ಶ್ರೀಮತಿ ವಿನಯಾಪ್ರಸಾದ್.

ಶುಕ್ರವಾರ, ನವೆಂಬರ್ 18, 2011

ಸಜ್ಜನರು ಯಾರು? - ಶ್ರೀ ಸೂರ್ಯಪ್ರಕಾಶ ಪಂಡಿತರ ಮಾತು

ಸಜ್ಜನರಾರು?  ಎಂಬ ಬಗ್ಗೆ ಬೆಂಗಳೂರಿನ ಚಿಂತಕ ಶ್ರೀ ಸೂರ್ಯ ಪ್ರಕಾಶ ಪಂಡಿತರ   ಮಾತುಗಳು ಇಲ್ಲಿವೆ.





******************
- ಹರಿಹರಪುರ ಶ್ರೀಧರ್.

ಗುರುವಾರ, ನವೆಂಬರ್ 17, 2011

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೨

       ಅಥರ್ವ ವೇದವಂತೂ ಉಚ್ಛ-ನೀಚಭಾವದ ಬುಡಕ್ಕೇ ಕೊಡಲಿ ಪೆಟ್ಟು ಹಾಕುತ್ತಾ ಹೇಳುತ್ತದೆ: 
 ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹ ಚಿತ್ತಮೇಷಾಮ್ |
 ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || (ಅಥರ್ವ.೬.೬೪.೨.)
      ಈ ಮಾನವರೆಲ್ಲರ [ಮಂತ್ರಃ ಸಮಾನಃ] ಮಂತ್ರ ಸಮಾನವಾಗಿರಲಿ. [ಸಮಿತಿಃ ಸಮಾನೀ] ಸಮಿತಿ ಸಮಾನವಾಗಿರಲಿ. [ವ್ರತಂ ಸಮಾನಮ್] ವ್ರತವೂ ಸಮಾನವಾಗಿರಲಿ. [ಏಷಾ ಚಿತ್ತಂ ಸಹ] ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ. [ವಃ] ನಿಮ್ಮೆಲ್ಲರಿಗೂ, [ಸಮಾನೇನ ಹವಿಷಾ] ಸಮಾನವಾದ ಖಾದ್ಯ, ಪೇಯಗಳನ್ನೇ [ಜುಹೋಮಿ] ದಾನ ಮಾಡುತ್ತೇನೆ. [ಸಮಾನಂ ಚೇತಃ] ಸಮಾನವಾದ ಚೈತನ್ಯದಲ್ಲಿಯೇ [ಅಭಿ ಸಂ ವಿಶಧ್ವಮ್] ಎಲ್ಲೆಡೆಯಿಂದಲೂ ಪ್ರವೇಶಿಸಿರಿ.  
     ಭಗವಂತ ಇಷ್ಟು ಸ್ಪಷ್ಟವಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿದ್ದಾನೆ. ಅಥರ್ವವೇದದಲ್ಲಿ ಇನ್ನೊಂದೆಡೆ ಸಮಾನೀ ಪ್ರಪಾ ವೋsನ್ನಭಾಗಃ|| (ಅಥರ್ವ.೩.೩೦.೬.) [ಪ್ರಪಾ ಸಮಾನೀ] ನಿಮ್ಮೆಲ್ಲರ ಜಲಾಶಯಗಳೂ ಒಂದಾಗಿರಲಿ. [ವ ಅನ್ನಭಾಗಃ] ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ ಎನ್ನುತ್ತಿದೆ. ಇಂತಹ ಅದೆಷ್ಟೋ ಮಂತ್ರಗಳನ್ನುದ್ಧರಿಸಬಹುದು. ಅದರೆ ಇಷ್ಟರಿಂದಲೇ ಪಾಠಕರು ವೇದಗಳ ಭಾವನೆಯನ್ನು ತಿಳಿದುಕೊಳ್ಳಬಲ್ಲರು.
 ************** 
ಪಂ. ಸುಧಾಕರ ಚತುರ್ವೇದಿ.

ಶುಕ್ರವಾರ, ನವೆಂಬರ್ 11, 2011

'ಹೊಸಬೆಳಕು' ಮೂಡಲಿದೆ!


ವೇದಗಳ ಬಗ್ಗೆ 'ಹೊಸಬೆಳಕು' ಮೂಡಲಿದೆ!
     ಪುರಾತನವಾದ ವೇದದ ಕುರಿತು ಸಾಕಷ್ಟು ಆರೋಪ, ಅಪವಾದಗಳಿವೆ. ಅಪದ್ಧವಾಗಿ ಮಾತನಾಡುವ ಕೆಲವರು ವಿದ್ವಾಂಸರೆನಿಸಿಕೊಂಡವರು, ಕೆಲವರು ಕಾವಿಧಾರಿಗಳಿಂದಲೇ ವೇದಕ್ಕೆ ಕೆಟ್ಟ ಹೆಸರು ಬಂದಿದೆಯೆಂದರೆ ತಪ್ಪಾಗುವುದಿಲ್ಲ. ರೂಢಿಗತ ಕಲ್ಪನೆಗಳಿಗೆ ಹೊರತಾದ, ವೇದದ ನಿಜಮುಖವನ್ನು ಪರಿಚಯಿಸುವ ಒಂದು ವಿನೂತನ ಕಾರ್ಯಕ್ರಮ ದೂರದರ್ಶನದ ಚಂದನವಾಹಿನಿಯಲ್ಲಿ ಮೂಡಿಬರಲಿದೆ. ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರು ಮತ್ತು ವೇದಗಳ ಬಗ್ಗೆ ಸಾಕಷ್ಟು ಓದಿಕೊಂಡಿರುವ ಶ್ರೀಮತಿ ವಿನಯಾಪ್ರಸಾದ್ ರವರು ನಡೆಸಿಕೊಡಲಿರುವ ಈ ಕಾರ್ಯಕ್ರಮ ಸೋದರ-ಸೋದರಿಯರ ಸಂವಾದರೂಪದಲ್ಲಿದ್ದು ಇದೇ ದಿನಾಂಕ ೧೩-೧೧-೨೦೧೧ರಿಂದ ಪ್ರತಿ ಭಾನುವಾರ ಬೆಳಿಗ್ಗೆ ೯-೩೦ರಿಂದ ೧೦-೦೦ರವರೆಗೆ ೧೩ ಕಂತುಗಳಲ್ಲಿ ಮೂಡಿಬರಲಿದೆ. ಮೊದಲ ಕಂತಿನಲ್ಲಿ ವೇದವಿಜ್ಞಾನ ಮತ್ತು ಷೋಡಶೋಪಚಾರಗಳ ಕುರಿತು ಮಾಹಿತಿ ಕೊಡಲಿದ್ದಾರೆ. ಬ್ರೋಂಜ್ ಕಮ್ಯೂನಿಕೇಷನ್ಸ್ ಎಂಬ ಜಾಹಿರಾತು ಸಂಬಂಧಿ ಸಂಸ್ಥೆ ನಡೆಸುತ್ತಿರುವ ಶ್ರೀಯುತ ರಮೇಶ್ ಮತ್ತು ಸುರೇಶ್ ನಿರ್ಮಾಪಕರಾಗಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಪ್ರಾಯೋಜಕತ್ವ ಇಲ್ಲ. ವೇದಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಬೇಕು, ವಿಶೇಷವಾಗಿ ಯುವ ಪೀಳಿಗೆಗೆ ಸರಳವಾಗಿ ವೇದಗಳ ಮಹತ್ವ ತಿಳಿಸಿಕೊಡಬೇಕು ಎಂಬುದಷ್ಟೇ ಅವರ ಆಶಯವಾಗಿದೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಹಲವಾರು ಉಪನ್ಯಾಸಗಳನ್ನು ಕೇಳಿರುವ ನಾನು ಅವರಿಂದ ಪ್ರಭಾವಿತನಾದವರಲ್ಲಿ ಒಬ್ಬನಾಗಿದ್ದೇನೆ. ಈ ಕಾರ್ಯಕ್ರಮ ವಿನೂತನ ಹಾಗೂ ಚಿಂತನೀಯವಾಗಿರುವುದರಲ್ಲಿ ನನಗೆ ಅನುಮಾನವಿಲ್ಲ. ತಾವು ಈ ಕಾರ್ಯಕ್ರಮ ವೀಕ್ಷಿಸಬಹುದು. ಸಂದೇಹಗಳು, ಪ್ರಶ್ನೆಗಳು ಇದ್ದಲ್ಲಿ ಶ್ರೀ ಸುಧಾಕರಶರ್ಮರವರು ಉತ್ತರಿಸಲು ಸಿದ್ಧರಾಗಿದ್ದಾರೆ.