ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಮಾರ್ಚ್ 11, 2014

ಮಾಡಿದ್ದುಣ್ಣೋ ಮಹರಾಯ!

ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು |
ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ ||

ಒಂಬತ್ತು ಬಾಗಿಲಿನ ದೇವಮಂದಿರ
ಮಂದಿರದ ಅಧಿಪತಿಯೆ ಸತ್ಯಸುಂದರ |
ಸುತ್ತೆಲ್ಲ ಹರಿದಿಹುದು ನವರಸಧಾರಾ
ಮಾಯೆಯ ಮುಸುಕಿನಲಿ ಜೀವನಸಾರ || ೧ ||

ಮಂದಿರದ ಒಳಗಿಹುದು ಕಾಣದ ಪಾತ್ರೆ
ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ |
ದೇವನ ಲೆಕ್ಕದಲಿ ದೋಷವೆಂಬುದಿಲ್ಲ
ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ ||

ಮಾಡಿದ ಕರ್ಮವದು ಬೆನ್ನನು ಬಿಡದು
ಧನಕನಕ ಬಂಧು ಬಳಗ ನೆರವಿಗೆ ಬರದು |
ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
ರಸಪಾಕವ ಮಾಡುವುದೆ ಇರುವ ದಾರಿಯು || ೩ ||
-ಕ.ವೆಂ.ನಾ.
*************
ಪ್ರೇರಣೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ಅರ್ಥ:  ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು, ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ (ಕರ್ಮಫಲವಿಪಾಕ) ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ.

6 ಕಾಮೆಂಟ್‌ಗಳು:

  1. Lakshmi G Prasad
    tumba chennaagide

    Padmadiwa Diwa
    Hwdu beyicida Anna(karma)paaka madida vanannu puna marali praveshiciye thiruthe.

    Jayaprakash Sumana
    Thumba sandharbika , Thumbaa samanjasa, Indina arogya samasyegaligoo IDE Utthara !
    Mane Adige undu arogya kettavarilla Allave ?!

    ಪ್ರತ್ಯುತ್ತರಅಳಿಸಿ
  2. ಮುಂದುವರೆಯಲಿ ಮಂತ್ರಾರ್ಥವನ್ನು ಕವನವಾಗಿಸುವ ನಿಮ್ಮ ನೂತನ ಪ್ರಯೋಗ. ಸಾಮಾನ್ಯ ಜನರಿಗೆ ಬಲು ಬೇಗ ಅರ್ಥವಾಗುವುದರಲ್ಲಿ ಸಂಶಯವಿಲ್ಲ. ಉತ್ತಮ ಪ್ರಯತ್ನ ನಾಗರಾಜ್,ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Swami Chidrupananda Saraswati
      V good effort, please continue

      Kavi Nagaraj
      ಪೂಜ್ಯರ ಆಶೀರ್ವಾದಕ್ಕಿಂತ ಇನ್ನೇನು ಬೇಕು? ಪೂಜ್ಯರಿಗೆ ಸಾಷ್ಟಾಂಗ ಪ್ರಣಾಮಗಳು.

      ಅಳಿಸಿ
    2. partha1059 on March 21, 2014 - 7:39pm
      ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
      ರಸಪಾಕವ ಮಾಡುವುದೆ ಇರುವ ದಾರಿಯು

      kavinagaraj on March 22, 2014 - 7:52am
      :)

      sathishnasa on March 21, 2014 - 9:05pm
      ನಾವು ಬೆಳೆಸಿದ ಮರದ ಪಲ ನಾವೆ ತಿನ್ನ ಬೇಕು
      ನಾವು ಮಾಡಿದಡಿಗೆಯನ್ನು ನಾವೇ ಉಣ್ಣ ಬೇಕು
      ನಾವು ನೆಟ್ಟ ಮುಳ್ಳ ಗಿಡ ನಮ್ಮ ಕಾಲಡಿಗೆ
      ನಾವು ಮಾಡಿದ ಪಾಪ ನಮ್ಮ ಸಂತತಿಗೆ ....ನೆನಪಿಗೆ ಬಂದ ಸಾಲುಗಳು ( " ನೀ " ಎನ್ನುವ ಕಡೆ " ನಾವು " ಎಂದು ಸೇರಿಸಿದ್ದೇನೆ)
      ಸುಂದರ ಸಾಲುಗಳು ನಾಗರಾಜ್ ರವರೇ ........................ಸತೀಶ್

      kavinagaraj on March 22, 2014 - 7:53am
      ವಂದನೆ, ಸತೀಶರೇ. 'ಉದ್ಧರೇದಾತ್ಮನಾತ್ಮಾನಾಮ್'!'

      nageshamysore on March 22, 2014 - 3:12am
      ಸತ್ಯಂ ಶಿವಂ ಸುಂದರಂ :-)

      kavinagaraj on March 22, 2014 - 7:54am
      ಹಿತಮ್! ದನ್ಯವಾದ, ನಾಗೇಶರೇ. :)

      ಅಳಿಸಿ
    3. Dhaatu on March 22, 2014 - 2:21pm
      ಮಾಯೆಯ ಮುಸುಕಿನಲಿ ಜೀವನಸಾರ... ಪ್ರತಿಪಂಕ್ತಿಯೂ ಅದ್ಭುತ ಸರ್.

      kavinagaraj on March 23, 2014 - 10:16am
      ವಂದನೆ, ಧಾತುರವರೇ.
      :
      lpitnal on March 23, 2014 - 9:32am
      ಕವಿನಾರವರಿಗೆ, ಲಕ್ಷ್ಮೀಕಾಂತ ಇಟ್ನಾಳರ ವಂದನೆಗಳು. ಕವನ ಗಹನಾರ್ಥಗಳ, ಗೂಡಾರ್ಥಗಳ ಎಳೆಗಳ ಹೆಣಿಕೆ. ಬಿಡಿಸಿದಷ್ಟೂ ಬಿಡಿಸಿಕೊಳ್ಳುತ್ತದೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ. ಧನ್ಯವಾದಗಳು.

      kavinagaraj on March 23, 2014 - 10:17am
      ಮೆಚ್ಚುಗೆಗೆ ವಂದನೆಗಳು ಲಕ್ಷ್ಮೀಕಾಂತ ಇಟ್ನಾಳರೇ.

      ಅಳಿಸಿ