ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ನವೆಂಬರ್ 21, 2012

ಆದರ್ಶದ ಬೆನ್ನು ಹತ್ತಿ…..




“ಇವರನ್ನು ಯಾಕೆ ಅರೆಸ್ಟ್ ಮಾಡಿದ್ದೀರಿ?”
“ಇವರು ಕೇಂದ್ರ ಸರ್ಕಾರದ ವಿರುದ್ಧವಾಗಿ ದೇಶದ್ರೋಹದ ಕೆಲಸಮಾಡ್ತಾ ಇದಾರೆ ಸ್ವಾಮಿ”
“ಇವರು ದೇಶದ್ರೋಹದ ಕೆಲಸ ಮಾಡ್ತಾ ಇದಾರೆ ಅನ್ನೋದಕ್ಕೆ ಸಾಕ್ಷಿ ಇದೆಯಾ?”
“ಸಾಕ್ಷಿ ಇದೆ ಸ್ವಾಮಿ”
“ಏನು ಸಾಕ್ಷಿ?”
“ಇವರ ಮನೆಯಲ್ಲಿ ಮಹಾತ್ಮಗಾಂಧಿಜಿಯ ಫೋಟೋ   ಇರುವ ಕರಪತ್ರಗಳು ಸಿಕ್ಕಿವೆ."
“ಹಾಸನದಲ್ಲಿ ಎಷ್ಟು ಮನೆಗಳಿವೆ?”
"ಗೊತ್ತಿಲ್ಲ."
"ಅಂದಾಜಾಗಿ ಹೇಳಿ ಪರವಾಗಿಲ್ಲ.ಇಪ್ಪತ್ತು ಸಾವಿರ ಮನೆಗಳು ಇರಬಹುದಾ? ಅದರಲ್ಲಿ ಎಷ್ಟು ಮನೆಗಳಲ್ಲಿ ಮಹಾತ್ಮಗಾಂಧಿಜಿಯ ಫೋಟೋ ಇರಬಹುದು? ಒಂದು ಐದು ನೂರು ಮನೆಗಳಲ್ಲಿ? ಹೋಗಲಿ, ಒಂದು ಇನ್ನೂರು ಮನೆಗಳಲ್ಲಿ?”
“ಇರಬಹುದು.”
“ಹಾಗಾದರೆ ಅವರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಲಿಲ್ಲ? ಇವರನ್ನೇ ಯಾಕೆ ಮಾಡಿದಿರಿ?”
“ಫೋಟೋ ಮಾತ್ರಾ ಆಗಿದ್ರೆ ಅವರನ್ನು ಅರೆಸ್ಟ್ ಮಾಡ್ತಿರಲಿಲ್ಲ. ಫೋಟೋದ ಮೇಲೆ  ರಾಷ್ಟ್ರದ್ರೋಹದ ಬರಹ ಇತ್ತು”
£ÀÄ ಬರಹ ಇತ್ತು?”
“ಅಸತ್ಯ,ಅಧರ್ಮ,ದಬ್ಬಾಳಿಕೆಗೆ ತಲೆಬಾಗುವುದು ಹೇಡಿತನ ಅಂತಾ ಬರೆದಿತ್ತು.”
“ಅದು ಗಾಂಧೀಜಿ ನೇ ಹೇಳಿದ್ದಲ್ವಾ?"
"ಇರಬಹುದು."
"ಆ ಮಾತು ರಾಷ್ಟ್ರದ್ರೋಹ ಅನ್ನೋದಾದ್ರೆ ,  ಗಾಂಧೀಜಿಯವರೂ ರಾಷ್ಟ್ರದ್ರೋಹಿ ಆಗುತ್ತಾರೆ. ಹೋಗಲಿ ಬಿಡಿ, ಆ ಮಾತು ಹೇಗೆ    ರಾಷ್ಟ್ರದ್ರೋಹ ಆಗುತ್ತೆ ಅನ್ನೋದನ್ನು ವಿವರಿಸುತ್ತೀರಾ?"
"........."

    ಇದು ಯಾವುದೋ    ಸಿನೆಮಾ   ಡೈಲಾಗ್ ಅಲ್ಲ. 1975 ನೇ ಇಸವಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಾಸನದಲ್ಲೂ ಕೂಡ ತುರ್ತು ಪರಿಸ್ಥಿತಿ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಅಂದು ಭಾರತ ರಕ್ಷಣಾ ನಿಯಮ [DIR] ಮತ್ತು ಆಂತರಿಕ ಭದ್ರತಾ ಕಾಯದೆಯನ್ವಯ [MISA] ನೂರಾರು ಜನ ದೇಶ ಭಕ್ತರನ್ನು ಜೈಲಿಗೆ  ಕಳಿಸಲಾಗಿತ್ತು. DUÀ ಫುಡ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕೆ.ವಿ.ನಾಗರಾಜರನ್ನೂ ಅರೆಸ್ಟ್  ಮಾಡಲಾಗಿತ್ತು. ನಾಗರಾಜರ ಕೇಸ್ ನಡೆಸುತ್ತಿದ್ದ   ವಕೀಲರಾದ ಶ್ರೀ ಬಿ.ಎಸ್.ವೆಂಕಟೇಶಮೂರ್ತಿಯವರು  ನ್ಯಾಯಾಲಯದಲ್ಲಿ  ಪಾಟೀಸವಾಲು ಮಾಡುವಾಗ   ಪೋಲೀಸರಿಗೆ ಹಾಕಿದ ಪ್ರಶ್ನೆಗಳಿವು.
      ಶ್ರೀ ಕೆ.ವಿ.ನಾಗರಾಜರು  ತುರ್ತುಪರಿಸ್ಥಿಯ ತಮ್ಮ ಹೋರಾಟದ ಘಟನೆಗಳನ್ನು  ಮುಂದಿನ ಪೀಳಿಗೆಗೆ ಮರೆಯಬಾರದೆಂಬ ಕಾರಣಕ್ಕಾಗಿ ದಾಖಲಿಸಿರುವ "ಆದರ್ಶದ ಬೆನ್ನು ಹತ್ತಿ…..” ಪುಸ್ತಕವು ಇದೇ 29.11.2012 ಗುರುವಾರ ಲೋಕಾರ್ಪಣೆಯಾಗಲಿದೆ. ತುರ್ತುಪರಿಸ್ಥಿತಿಯ ಹೋರಾಟಗಳ ನೆನಪು ಒಂದು ಭಾಗವಾದರೆ ರಾಜ್ಯ ಸರ್ಕಾರೀ ಅಧಿಕಾರಿ/ನೌಕರನಾಗಿ ಸೇವೆ ಮಾಡುವಾಗಿನ ತಮ್ಮ ಅನುಭವಗಳನ್ನು ಇನ್ನೊಂದು ಭಾಗದಲ್ಲಿ ಹಂಚಿಕೊಂಡಿದ್ದಾರೆ. ಭ್ರಷ್ಠಾಚಾರ ಎಂಬುದು ಚರ್ಚಾರ್ಹ ವಿಷಯವೇ ಅಲ್ಲ,ಅದೊಂದು ಸರ್ವೇ ಸಾಮಾನ್ಯ ಎಂಬ ಮಾನಸಿಕತೆಗೆ ಬಂದು ನಿಂತಿರುವ ಈ ದಿನಗಳಲ್ಲಿ  ಶ್ರೀ ನಾಗರಾಜರು ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುವಾಗ ಎದುರಾದ ಸಮಸ್ಯೆಗಳು, ಅದನ್ನೆಲ್ಲಾ ದಿಟ್ಟವಾಗಿ ಎದುರಿಸಿದ ರೀತಿ, ಎಲ್ಲವನ್ನೂ ಮನಮುಟ್ಟುವಂತೆ ದಾಖಲಿಸಿದ್ದಾರೆ. ಕೃತಿಯನ್ನು ಓದಲು ಆರಂಭಿಸಿದರೆ ಎಲ್ಲವನ್ನೂ ಮರೆತು ತನ್ನೆಡೆಗೆ ಹಿಡಿದಿಟ್ಟುಕೊಳ್ಳುವ ಅವರ ಬರವಣಿಗೆಯ ಶೈಲಿ ಓದುಗರನ್ನು ಬೆರಗುಗೊಳಿಸದೆ ಇರದು.
     1970 ರ ನಂತರ ಜನ್ಮ ತಾಳಿರುವ ಇಂದಿನ ಪೀಳಿಗೆಗೆ “ತುರ್ತು ಪರಿಸ್ಥಿತಿಯ ಹೋರಾಟ ಎಂದರೇನೆಂಬುದು UÉÆvÉÛà E®è. ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವಾರು ಜನರು ಇಂದು ನಮ್ಮೊಂದಿಗಿಲ್ಲ. ಅಂದು ಎಲ್ಲಾ ಪತ್ರಿಕೆಗಳ ಬಾಯಿ ಮುಚ್ಚಿಸಲಾಗಿತ್ತು.  ಯಾವ ನಾಗರೀಕನೂ ಸರ್ಕಾರದ ವಿರುದ್ಧವಾಗಿ ಮಾತನಾಡುವಂತಿರಲಿಲ್ಲ. ಅಂತಹ ವಿಷಮ ಸಂದರ್ಭದಲ್ಲೂ  ತುರ್ತುಪರಿಸ್ಥಿತಿಯ ವಿರುದ್ಧವಾಗಿ ಪೋಲೀಸರ ಹದ್ದುಗಣ್ಣನ್ನು ಮರೆಮಾಚಿಸಿ ಪ್ರಕಟವಾಗುತ್ತಿದ್ದ “ಕಹಳೆ” ಪತ್ರಿಕೆಯು ಎಲ್ಲಿ ಮುದ್ರಣವಾಗುತ್ತೆ? ಯಾರು ಪ್ರಸಾರ ಮಾಡುತ್ತಾರೆಂಬುದು ಪೋಲೀಸರಿಗೆ ದೊಡ್ದ ಪ್ರಶ್ನೆಯಾಗಿತ್ತು. ಅನುಮಾನ ಬಂದವರನ್ನು ಸ್ಟೇಶನ್ನಿಗೆ ಎಳೆದೊಯ್ದು “ಏರೋಪ್ಲೇನ್” ಎತ್ತುತ್ತಿದ್ದ ಕಾಲ. ಆದರೆ ಅಂದು ಹಲವಾರು ದೇಶಭಕ್ತರೂ ಕೂಡ ಪೋಲೀಸರ ಅಮಾನುಷ ಶಿಕ್ಷೆಗೆ ಒಳಗಾಗಿದ್ದ ಕೆಟ್ಟದಿನಗಳು.  ಆರೆಸ್ಸೆಸ್ ಸೇರಿದಂತೆ 50-60 ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಗಿತ್ತು. ಆರೆಸ್ಸೆಸ್ ಮುಂಚೂಣಿಯಲ್ಲಿ ನಿಂತು ಜಯಪ್ರಕಾಶ ನಾರಾಯಣರ ನಾಯಕತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ನಡೆದ ಅಭೂತಪೂರ್ವ ಆಂದೋಲನ ದೇಶದಲ್ಲಿ ಪ್ರಜಾಸತ್ತೆ ಉಳಿಯಲು ಕಾರಣವಾಯಿತು. ಲಕ್ಷಾಂತರ ತರುಣರು ಇದರಲ್ಲಿ ಭಾಗವಹಿಸಿ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದರು. ನೂರಾರು ಜನರು ತಮ್ಮ ಜೀವವನ್ನೇ ತೆತ್ತರು. ಕರ್ನಾಟಕದಲ್ಲೂ ಸಹ ಆಂದೋಲನ ಜನ ಜಾಗೃತಿಗೊಳಿಸುವಲ್ಲಿ, ಸರ್ವಾಧಿಕಾರಿಗಳನ್ನು ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಯಿತು. ಹಾಸನ ಜಿಲ್ಲೆಯಲ್ಲೂ ಸಾವಿರಾರು ತರುಣರು ಪ್ರತಿಭಟನೆಯಲ್ಲಿ ಪಾಲುಗೊಂಡದ್ದು ಇತಿಹಾಸ. 13 ಜನರನ್ನು ಯಾವುದೇ ವಿಚಾರಣೆಗೊಳಪಡದೆ 2 ವರ್ಷಗಳ ಕಾಲ ಬಂಧಿಸಿಡಬಹುದಾದ ಮೀಸಾ ಕಾಯದೆಯನ್ವಯ ಬಂಧಿಸಲಾಗಿತ್ತು. ಸುಮಾರು 300 ಜನರನ್ನು ಭಾರತ ರಕ್ಷಣಾ ಕಾಯದೆಯನ್ವಯ ಬಂಧಿಸಿದ್ದರು. ಸಾವಿರಾರು ತರುಣರ ಮೇಲೆ ದಂಡ ಪ್ರಕ್ರಿಯಾ ಸಂಹಿತೆಯ ವಿವಿಧ ಕಲಮುಗಳ ಪ್ರಕಾರ ಮೊಕದ್ದಮೆಗಳನ್ನು ಹೂಡಲಾಗಿತ್ತು. ಕೊನೆಕೊನೆಗೆ ಜೈಲಿನಲ್ಲಿ ಸ್ಥಳವಿರದ ಕಾರಣ ಬಂಧಿಸಿ, ಮುಚ್ಚಳಿಕೆ ಬರೆಯಿಸಿಕೊಂಡು, ಹೊಡೆದು ಬಡಿದು ಬಿಟ್ಟದ್ದೂ ಉಂಟು. ಆ ಸಂದರ್ಭದಲ್ಲಿ ಅನುಭವಿಸಿದ ಕಿರುಕುಳ, ಹಿಂಸೆಗಳಿಂದಾಗಿ ಆಗ ಹಾಸನ ಜಿಲ್ಲೆಯ ಆರೆಸ್ಸೆಸ್ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈಯವರು ತಮ್ಮ 30-32ರ  ಕಿರಿಯ ವಯಸ್ಸಿನಲ್ಲೇ ಮತಿವಿಕಲ್ಪತೆಗೆ ಒಳಗಾಗಿ ಕೊನೆಯುಸಿರೆಳೆದದ್ದು ದುರಂತ.
     ಶ್ರೀ ನಾಗರಾಜರು ಬರೆದಿರುವುದು    ಹೋರಾಟಕಾಲದ ಸಮಗ್ರ ಚಿತ್ರಣವಲ್ಲ. ಒಬ್ಬ ಹೋರಾಟಗಾರನಾಗಿ ಅವರ ಅನುಭವಗಳನ್ನು ದಾಖಲಿಸಿದ್ದಾರೆ. ತುರ್ತು ಪರಿಸ್ಥಿಯ ದಿನಗಳನ್ನು ನೆನೆದುಕೊಂಡರೆ ಕಣ್ಣುಗಳು  ತೇವ ವಾಗುತ್ತವೆ. ಹೀಗೂ ಇತ್ತಾ! ಎಂದು ಅಂದಿನ ದಿನಗಳನ್ನು ಕಣ್ಣಾರೆ ಕಂಡ, ಹೋರಾಟದಲ್ಲಿ ನೇರವಾಗಿ ಅಥವಾ ಗುಪ್ತವಾಗಿ ಹೋರಾಡಿದ ನಮ್ಮಂತವರಿಗೇ ಅಚ್ಚರಿಯಾಗುತ್ತದೆ. ಸ್ವಾತಂತ್ರ್ಯ ಆಂಧೋಳನದಲ್ಲಿದ್ದ 99% ಜನರು ಇಂದು ನಮ್ಮೆದುರು ಇಲ್ಲ. ಎರಡನೆಯ ಸ್ವಾತಂತ್ರ್ಯಹೋರಾಟವೆಂದೇ ಹೇಳಬಹುದಾದ 1975-77 ರ ಹೋರಾಟದಲ್ಲಿ ಪಾಲ್ಗೊಂಡವರಲ್ಲಿ ಕೆಲವರನ್ನಾದರೂ ನೋಡಬೇಕೆ?
ಹಾಗಾದರೆ ಬನ್ನಿ…..
ಸ್ಥಳ: ಶ್ರೀ  ರಾಮಕೃಷ್ಣ ವಿದ್ಯಾಲಯ ಸಭಾಂಗಣ
ದಿನಾಂಕ: 29.11.2012 ಗುರುವಾರ ಸಂಜೆ 6.00 ಕ್ಕೆ.
ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ಕಥನ ಕೇಳ  ಬನ್ನಿ...


ಭಾನುವಾರ, ನವೆಂಬರ್ 18, 2012

ದಿನಾಂಕ 18.11.2012 ರಂದು ನಡೆದ ವೇದಪಾಠ








ದಿನಾಂಕ 18.11.2012 ರಂದು ನಡೆದ ವೇದಪಾಠವನ್ನು ಇಲ್ಲಿ ಪ್ರಕಟಿಸಲಾಗಿದೆ. ಮೇಲ್ ಮೂಲಕ ವಿಳಾಸ ನೀಡಿರುವ    ಎಲ್ಲರಿಗೂ ಪಾಠವನ್ನು ಕಳಿಸಲಾಗಿದೆ. ತಲುಪದಿದ್ದವರು ತಿಳಿಸಿದರೆ ಪುನ: ಕಳಿಸಿಕೊಡಲಾಗುವುದು. ಹೊಸದಾಗಿ  ಸಾಪ್ತಾಹಿಕ ವೇದ ಪಾಠವನ್ನು ವೆಬ್ ಸೈಟ್ ಮೂಲಕ ಕಲಿಯಬಯಸುವವರು " ವೇದಪಾಠ" ಲೇಬಲ್ ಮೇಲೆ ಕ್ಲಿಕ್ ಮಾಡಿ ಮೊದಲ ಪಾಠದಿಂದ ಅನುಸರಿಸಬಹುದು. ಆರಂಭದಲ್ಲಿರುವ ಪರಿಚಯ ಉಪನ್ಯಾಸವನ್ನು ಕೇಳಿ ವೇದಪಾಠವನ್ನು ಆರಂಭಿಸುವುದು ಸೂಕ್ತ. ಹಾಸನದಲ್ಲಿ ನಡೆಯುತ್ತಿರುವ "ಎಲ್ಲರಿಗಾಗಿ ವೇದ ಪಾಠವು" ಪೂರ್ಣ ಉಚಿತವಾಗಿದ್ದು ಹಾಸನಕ್ಕೆ ಸಮೀಪ ಇರುವ ನಿಮ್ಮ ಮಿತ್ರರನ್ನು  ಪ್ರತ್ಯಕ್ಷ ವೇದಪಾಠದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ನಮ್ಮ ವಿಳಾಸ:

ಈಶಾವಾಸ್ಯಮ್
ಶಕ್ತಿ ಗಣಪತಿ ದೇವಾಲಯ ರಸ್ತೆ
ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ
ಸಂಪರ್ಕ ದೂರವಾಣಿ: 08172-250566/9663572406

ಮಂಗಳವಾರ, ನವೆಂಬರ್ 13, 2012

ಸಮಾನತೆ ಸಾರುವ ವೇದ


ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ  ಜಿಗಾತನ || [ಋಗ್. ೫.೫೯.೬]
     ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ.

ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ | ಸಂ ಭ್ರಾತರೋ ವಾವೃಧುಃ ಸೌಭಗಾಯ || ಯುವಾ ಪಿತಾ ಸ್ವಪಾ ರುದ್ರ ಏಷಾಂ | ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || [ಋಗ್. ೫.೬೦.೫]
     ಈ ಮಾನವರು ತಮಗಿಂತ ಉಚ್ಛರನ್ನು ಹೊಂದಿಲ್ಲ, ನೀಚರನ್ನೂ ಹೊಂದಿಲ್ಲ, ಇವರು ಪರಸ್ಪರ ಅಣ್ಣ ತಮ್ಮಂದಿರು, ಸೌಭಾಗ್ಯಕ್ಕಾಗಿ ಮುಂದೆ ಸಾಗುತ್ತಾರೆ. ಆತ್ಮರಕ್ಷಕನೂ, ಅಜರನೂ ಆದ, ಪಾಪಿಗಳಿಗೆ ದಂಡ ವಿಧಿಸುವ ಭಗವಂತನು, ಇವರೆಲ್ಲರ ತಂದೆ. ಭೂಮಿದೇವಿ, ಮರ್ತ್ಯರಾದ ಈ ಮಾನವರಿಗಾಗಿ ಶುಭದಿನಗಳನ್ನು ತೋರಿಸುವವಳೂ, ಉತ್ತಮ ಜೀವನಪ್ರದ ರಸಗಳನ್ನು ಕರೆಯುವವಳೂ ಆಗಿದ್ದಾಳೆ.

ಸಮಾನೋ ಮಂತ್ರಃ ಸಮಿತಿಃ ಸಮಾನಂ ವ್ರತಂ ಸಹ ಚಿತ್ತಮೇಷಾಂ | ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || [ಅಥರ್ವ.೬.೬೪.೨]
     ಈ ನಿಮ್ಮೆಲ್ಲರಿಗೂ ಮಂತ್ರವು ಸಮಾನವಾಗಿದೆ. ಸಮಿತಿಯೂ ಸಮಾನವಾಗಿದೆ. ವ್ರತವೂ ಸಮಾನವೇ. ನಿಮ್ಮ ಮನಸ್ಸು ಸಹಕರಿಸುವಂತಹುದಾಗಲಿ. ನಿಮ್ಮೆಲ್ಲರನ್ನೂ ಸಮಾನವಾದ ಭೋಗ್ಯವಸ್ತುವಿನೊಂದಿಗೆ ಯುಕ್ತರನ್ನಾಗಿ ಮಾಡುತ್ತೇನೆ. ಸಮಾನವಾದ ಆಹಾರ-ಪಾನೀಯಗಳನ್ನೇ ನೀಡುತ್ತೇನೆ. 

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ ಚ ನಮೋ ಜಘನ್ಯಾಯ ಚ ಬುದ್ಧ್ಯಾಯ ಚ || [ಯಜು. ೧೬-೩೨]
     ಗುಣ-ಕರ್ಮ ಸ್ವಭಾವಗಳಿಂದ ದೊಡ್ಡವನಾಗಿರುವವನಿಗೆ ನಮಸ್ಕಾರ. ಹಾಗೆಯೇ ಗುಣ-ಕರ್ಮ ಸ್ವಭಾವಗಳಿಂದ ಚಿಕ್ಕವನಾಗಿರುವವನಿಗೂ ನಮಸ್ಕಾರ. ಮತ್ತು, ವಯಸ್ಸಿನಲ್ಲಿ ಹಿರಿಯನಿಗೆ ನಮಸ್ಕಾರ. ಹಾಗೂ ವಯಸ್ಸಿನಲ್ಲಿ ಕಿರಿಯನಿಗೂ ನಮಸ್ಕಾರ. ಅಂತೆಯೇ ನಡುವಯಸ್ಕನಿಗೆ ನಮಸ್ಕಾರ. ಅದೇ ರೀತಿ, ಅವಿಕಸಿತ ಶಕ್ತಿಯುಳ್ಳವನಿಗೆ ನಮಸ್ಕಾರ. ಹೀನ ಸ್ಥಿತಿಯಲ್ಲಿರುವವನಿಗೂ, ವಿಶಾಲ ಮನಸ್ಕನಿಗೂ ನಮಸ್ಕಾರ.

ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
     ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ.

ಬುಧವಾರ, ನವೆಂಬರ್ 7, 2012

ವೇದಪಾಠ - 8



















http://www.vedasudhe.com/wp-content/uploads/2012/10/08-01.mp3
http://www.vedasudhe.com/wp-content/uploads/2012/10/08-02.mp3
http://www.vedasudhe.com/wp-content/uploads/2012/10/08-03.mp3
http://www.vedasudhe.com/wp-content/uploads/2012/10/04.mp3
ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಳ್ಳುವವರಿಗೆಲ್ಲರಿಗೂ ಇಂದು  ಮೇಲ್ ಮಾಡಲಾಗಿದೆ. ತಲುಪದಿದ್ದವರು  ತಿಳಿಸಿದರೆ ಕೂಡಲೇ ಮೇಲ್ ಮಾಡುವೆ. ಈ ತಾಣದಲ್ಲಿ ಆಡಿಯೋ ಸಮಸ್ಯೆ ಆದರೆ ಕೆಳಗಿನ ಕೊಂಡಿಯಲ್ಲಿ  ವೇದಪಾಠವನ್ನು ಕೇಳಬಹುದು.
http://vedabharatihassan.blogspot.in/

-ಹರಿಹರಪುರಶ್ರೀಧರ್

ಗುರುವಾರ, ನವೆಂಬರ್ 1, 2012

ಆಯುರ್ಧಾರಾ - ೬


ಆಹಾರ ವಿಧಿ ವಿಧಾನಗಳು :

ಹಿಂದಿನ ಸಂಚಿಕೆಯಲ್ಲಿ ನಾವು ಆಹಾರದ ಗುಣ ಮತ್ತು ಪ್ರಮಾಣದ ಬಗ್ಗೆ ತಿಳಿದುಕೊಂಡೆವು. ಈಗ ಆಹಾರವನ್ನು ಸೇವಿಸುವ ವಿಧಿ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.
ಆಹಾರ ಸೇವಿಸುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಅವಶ್ಯಕ :
ಬಿಸಿಯಾಗಿರುವ ಆಹಾರವನ್ನೇ ಸೇವಿಸಬೇಕು.
  • ಆಹಾರವು ಸ್ನಿಗ್ಧವಾಗಿರಬೇಕು (ತುಪ್ಪ ಮುಂತಾದ ಜಿಡ್ಡುಯುಕ್ತ ಆಹಾರ)
  • ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸಬೇಕು.
  • ಈ ಹಿಂದೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾದ  ನಂತರವಷ್ಟೇ ಮತ್ತೆ ಆಹಾರ ಸೇವಿಸಬೇಕು.
  • ಪರಸ್ಪರ ವಿರುದ್ಧಾಹಾರವನ್ನು ಸೇವಿಸಬಾರದು.
  • ಉತ್ತಮ ಪರಿಸರದಲ್ಲಿ ಆಹಾರವನ್ನು ಸೇವಿಸಬೇಕು.
  • ಅತಿ ವೇಗವಾಗಿ ಅಥವಾ ಅತಿ ವಿಳಂಬವಾಗಿ ಆಹಾರ                        ಸೇವಿಸಬಾರದು.
  • ಆಹಾರ ಸೇವಿಸುವಾಗ ಮಧ್ಯದಲ್ಲಿ ಮಾತನಾಡಬಾರದು.
  • ಆಹಾರ ಸೇವಿಸುವಾಗ ಮಧ್ಯದಲ್ಲಿ ನಗಬಾರದು.
  • ತನ್ಮಯತೆಯಿಂದ, ಏಕಾಗ್ರಚಿತ್ತರಾಗಿ, ಪ್ರಸನ್ನವಾದ ಮನಸ್ಸಿನಿಂದ ಆಹಾರವನ್ನು ಸೇವಿಸಬೇಕು.
                 ಈ ಮೇಲಿನ ನಿಯಮಾವಳಿಗಳನ್ನು ಪಾಲಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ :
  • ಬಿಸಿಯಾಗಿ ತಯಾರಿಸಿದ ಆಹಾರವು ಹೆಚ್ಚು ರುಚಿಕರವಾಗಿರುತ್ತದೆ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ ಹಾಗು ಬೇಗ ಜೀರ್ಣವಾಗುತ್ತದೆ. ಆದ್ದರಿಂದ ಬಿಸಿಯಾದ ಆಹಾರವನ್ನೇ ಸೇವಿಸಬೇಕು. ಆರಿದ, ತಂಗಳು ಹಾಗು ಹಳಸಿದ ಪದಾರ್ಥವು ಪಚನ ಶಕ್ತಿಯನ್ನು ಕುಗ್ಗಿಸಿ, ಆಮವನ್ನು ಉಂಟುಮಾಡಿ ರೋಗಗಳಿಗೆ ಕಾರಣವಾಗುತ್ತದೆ. 
  • ಸ್ನಿಗ್ಧವಾದ ಆಹಾರವು (ತುಪ್ಪ, ಬೆಣ್ಣೆ ಮುಂತಾದ ಜಿಡ್ಡು ಪದಾರ್ಥ ಬೆರೆಸಿದ ಆಹಾರ) ರುಚಿಕರವಾಗಿರುತ್ತದೆ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ, ಬೇಗ ಜೀರ್ಣವಾಗುತ್ತದೆ, ವಾತಾನುಲೋಮನ ಮಾಡುತ್ತದೆ, ಶರೀರಕ್ಕೆ ಪುಷ್ಟಿ ನೀಡುತ್ತದೆ, ಇಂದ್ರಿಯಗಳನ್ನು ದೃಢಮಾಡುತ್ತದೆ, ಅಂಗ-ಪ್ರತ್ಯಂಗಗಳ ಬಲವನ್ನು ವೃದ್ಧಿಸುತ್ತದೆ ಹಾಗು ಯೌವನವನ್ನು ಕಾಪಾಡುತ್ತದೆ. ಆದ್ದರಿಂದ ಸ್ನಿಗ್ಧಾಹಾರವನ್ನೇ ಸೇವಿಸಬೇಕು.  ಇತ್ತೀಚೆಗೆ ಜಿಡ್ಡು ತಿನ್ನುವುದರಿಂದ ಕೊಲೆಸ್ಟ್ರಾಲ್   ಹೆಚ್ಚಾಗಿ ರೋಗ ಬರುತ್ತದೆ ಎಂದು ಎಲ್ಲರೂ ಭಾವಿಸಿ ಜಿಡ್ಡು ತಿನ್ನುವುದನ್ನೇ ಬಿಟ್ಟಿದ್ದಾರೆ. ಇದು ತಪ್ಪು ಕಲ್ಪನೆಯಾಗಿದ್ದು, ತುಪ್ಪ ತಿನ್ನುವುದರಿಂದ ಯಾವ ತೊಂದರೆಯೂ ಆಗುವುದಿಲ್ಲ. ಬದಲಾಗಿ ಮೇಲೆ ತಿಳಿಸಿದ ಪ್ರಯೋಜನಗಳು ದೊರಕುತ್ತವೆ. ಆದ್ದರಿಂದ ಧೈರ್ಯವಾಗಿ, ಯಾವುದೇ ಅಂಜಿಕೆಯಿಲ್ಲದೆ ಸ್ನಿಗ್ಧಾಹಾರವನ್ನು ಸೇವಿಸಬಹುದು. 
  • ಪ್ರಮಾಣವು ಹೆಚ್ಚು ಕಡಿಮೆಯಾಗದಂತೆ ಊಟ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ, ಪಚನ ಶಕ್ತಿಯು ಕುಗ್ಗದೆ ಸುಖ ಪರಿಣಾಮವಾಗಿ(ಸುಖವಾಗಿ ಜೀರ್ಣವಾಗಿ) ಮಲ ಪ್ರವೃತ್ತಿಯು ಯಾವುದೇ ಕಷ್ಟವಿಲ್ಲದೇ ಆಗುವುದು. ಆದ್ದರಿಂದ ಸರಿಯಾದ ಪ್ರಮಾಣದಲ್ಲೇ ಊಟ ಮಾಡಬೇಕು.
  • ಈ ಹಿಂದೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾದ ನಂತರವಷ್ಟೇ ಮತ್ತೆ ಆಹಾರ ಸೇವಿಸುವುದರಿಂದ  ಆಹಾರ ಪಚನ ಕ್ರಿಯೆಯು ಸುಲಭವಾಗಿ ಆಗಿ, ಆಹಾರದ ರಸ ಭಾಗವು ಸರ್ವ ಧಾತುಗಳಿಗೂ ಒದಗಿ , ಆಯಸ್ಸಿನ ವೃದ್ಧಿಯಾಗುತ್ತದೆ. ಉದ್ಗಾರ(ತೇಗು) ಶುದ್ಧಿ ಹಾಗು ಹೃದಯ ಶುದ್ಧಿಯಾಗಿ(ಎದೆ ಭಾಗದಲ್ಲಿ ಉರಿ ಮುಂತಾದ ತೊಂದರೆ ಆಗುವುದಿಲ್ಲ) ದೇಹವು ಹಗುರವೆನಿಸುತ್ತದೆ. ಹೀಗೆ ಮಾಡದಿದ್ದಲ್ಲಿ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನವಾಗದ ಹಿಂದಿನ ಆಹಾರದೊಡನೆ ಬೆರೆತು ದೋಷ ಪ್ರಕೋಪವನ್ನುಂಟು ಮಾಡಿ ರೋಗಗಳನ್ನು ಉದ್ಭವಿಸುತ್ತದೆ.
  • ಪರಸ್ಪರ ವಿರುದ್ಧವಾದ ಆಹಾರಗಳು ಗರ ವಿಷದಂತೆ ಕೆಲಸ ಮಾಡುತ್ತದೆ. ಆದ್ದರಿಂದ ವಿರುದ್ಧಾಹಾರವು ನಿಷಿದ್ಧ. ವಿರುದ್ಧ ಆಹಾರಗಳ ಬಗೆಗೆ ಮುಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
  • ಉತ್ತಮ, ಶುಚಿಯಾದ ಪರಿಸರದಲ್ಲಿ ಆಹಾರವನ್ನು ಸೇವಿಸುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಕೊಳಕು ವಾತಾವರಣದಲ್ಲಿ ಮನಸ್ಸಿಗೆ ಅಸಹ್ಯ ಉಂಟಾಗಿ, ಊಟ ಸೇರುವುದಿಲ್ಲ ಹಾಗು ಸರಿಯಾಗಿ ಪಚನವಾಗುವುದಿಲ್ಲ.
  • ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ಆಹಾರ ಪದಾರ್ಥವು ಮೂಗು ಮುಂತಾದ ರಂಧ್ರಗಳಿಗೆ ಹೋಗಿ ತೊಂದರೆ ಉಂಟುಮಾಡುತ್ತದೆ(ನೆತ್ತಿ ಹತ್ತುವುದು) ಹಾಗು ಆಹಾರದ ಸಂಪೂರ್ಣ ಸಾದ್ಗುಣ್ಯ ದೇಹಕ್ಕೆ ದೊರಕುವುದಿಲ್ಲ. ಆದ್ದರಿಂದ ಆತಿ ವೇಗವಾಗಿ ಊಟ ಮಾಡಬಾರದು.
  • ಅತಿ ನಿಧಾನವಾಗಿ ತಿನ್ನುವುದರಿಂದ ಸರಿಯಾಗಿ ತೃಪ್ತಿಯಾಗದೆ ಹೆಚ್ಚು ತಿನ್ನುತ್ತಾರೆ. ಆಹಾರವು ತಣ್ಣಗಾಗಿ ವಿಷಮವಾಗಿ ಪಚನಗೊಳ್ಳುತ್ತದೆ. ಆದ್ದರಿಂದ ಆತಿ ನಿಧಾನವಾಗಿ ಊಟ ಮಾಡಬಾರದು.
  • ಮಾತನಾಡುತ್ತಾ, ನಗುತ್ತಾ, ತನ್ಮಯತೆಯಿಲ್ಲದೆ ತಿನ್ನುವುದರಿಂದಲೂ ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ಆಗುವ ತೊಂದರೆಗಳು ಉಂಟಾಗುತ್ತವೆ.
  • ಅಂತಿಮವಾಗಿ ನಮ್ಮ ಆತ್ಮಸಮೀಕ್ಷೆಯಂತೆ ಅಂದರೆ ನಮಗೆ ಯಾವ ಆಹಾರವು ಹೆಚ್ಚು ಸೂಕ್ತ, ಹೆಚ್ಚು ಒಗ್ಗುತ್ತದೆ ಮತ್ತು ಯಾವುದು ಒಗ್ಗುವುದಿಲ್ಲ ಎಂಬುದನ್ನು ನಿರ್ಧರಿಸಿಯೇ ಊಟ ಮಾಡಬೇಕು.
   ಹೀಗೆ ಮೇಲೆ ತಿಳಿಸಿದ ವಿಧಿ ವಿಧಾನಗಳನ್ನು ಅನುಸರಿಸಿ ಆಹಾರ ಸೇವಿಸಿದಾಗ ಖಂಡಿತ ಉತ್ತಮ ಆರೋಗ್ಯ ಭಾಗ್ಯ ಲಭಿಸಿ, ಸುದೀರ್ಘಾಯಸ್ಸು ನಮ್ಮದಾಗುತ್ತದೆ.