ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಜುಲೈ 25, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -9

     ವೈಜ್ಞಾನಿಕ ಪರಿಪಾಟಿಯ ಪ್ರಬಲ ಪೋಷಕಗಳಾದ ವೇದಗಳು ಅಂಧವಿಶ್ವಾಸಕ್ಕೆ, ಕಣ್ಣುಮುಚ್ಚಿ ನಡೆಯುವ ಅಂಧಪರಂಪರೆಗೆ ಘೋರವಿರೋಧಿಗಳಾಗಿವೆ. ಶ್ರದ್ಧೆಯ ಶತ್ರು ವೇದಗಳಲ್ಲ. ವೇದಾನುಯಾಯಿಗಳ ಹೃದಯಾಂತರಾಳದಿಂದ ವೇದಗಳು ಈ ಪ್ರಾರ್ಥನೆಯನ್ನು ಹೊರಡಿಸುತ್ತವೆ:
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯಂದಿನಂ ಪರಿ |
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನಃ ||
(ಋಕ್.10.151.5)

     [ಪ್ರಾತಃ] ಬೆಳಗಿನ ಹೊತ್ತು {ಶ್ರದ್ಧಾಂ ಹವಾಮಹೇ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಮಧ್ಯಂದಿನಂ ಪರಿ] ನಡುಹಗಲಿನಲ್ಲಿಯೂ [ಶ್ರದ್ಧಾಂ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಸೂರ್ಯಸ್ಯ ನಿಮೃಚಿ] ಸೂರ್ಯನ ಅಸ್ತಕಾಲದಲ್ಲಿಯೂ [ಶ್ರದ್ಧಾಂ] ಶ್ರದ್ದೆಯನ್ನೇ ಆವಾಹನೆ ಮಾಡುತ್ತೇವೆ. [ಶ್ರದ್ಧೇ] ಓ ಶ್ರದ್ಧೇ! [ಇಹ] ಈ ಜಗತ್ತಿನಲ್ಲಿ [ನ ಶ್ರದ್ಧಾಪಯ] ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು. 
     ಶ್ರದ್ಧೆ ಬೇಕು. ಆದರೆ ವೈಜ್ಞಾನಿಕವಾದ ದೃಷ್ಟಿಯನ್ನೇ ಬೆಳೆಸಿಕೊಳ್ಳಬೇಕೆಂದು ಬೋಧಿಸುವ ವೇದಗಳು, ಬುದ್ಧಿಯ, ಮೇಧಾಶಕ್ತಿಯ ಬೆಂಬಲವಿಲ್ಲದಿದ್ದರೆ ಆ ಶ್ರದ್ಧೆ ಅಂಧವಿಶ್ವಾಸವಾಗಿ ಮಾರ್ಪಡುವುದರಲ್ಲಿ ವಿಳಂಬವಾಗದೆಂಬುದನ್ನು ಬಲ್ಲವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ