ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಮೇ 25, 2010

ಹತ್ತು ಸತ್ಯ ನಿಯಮಗಳು


ಹತ್ತು ಸತ್ಯ ನಿಯಮಗಳು
1. ಎಲ್ಲ ಸತ್ಯ ವಿದ್ಯೆಗಳಿಗೂ ಮತ್ತು ಪದಾರ್ಥ ವಿದ್ಯೆಯಿಂದ ತಿಳಿಯಲ್ಪಡುವ ಸೆರ್ವಕ್ಕೂ ಪರಮಾತ್ಮನೇ ಆದಿಮೂಲನು.
2. ಪರಮಾತ್ಮನು ಸಚ್ಚಿದಾನಂದ ಸ್ವರೂಪನೂ, ನಿರಾಕಾರನೂ, ಸರ್ವಶಕ್ತನೂ, ನ್ಯಾಯಕಾರಿಯೂ,ದಯಾಳುವೂ, ಅಜನ್ಮನೂ, ಅನಂತನೂ, ನಿರ್ವಿಕಾರನೂ,ಅನಾದಿಯೂ, ಅನುಪಮನೂ, ಸರ್ವಾಧಾರನೂ, ಸರ್ವೇಶ್ವರನೂ, ಅಜರನೂ, ಸರ್ವಾಂತರ್ಯಾಮಿಯೂ, ಅಮರನೂ, ಅಭಯನೂ, ನಿತ್ಯನೂ, ಪವಿತ್ರನೂ, ಸೃಷ್ಟಿಕರ್ತನೂ ಆಗಿದ್ದಾನೆ.ಕೇವಲ ಅವನ ಉಪಾಸನೆಯನ್ನು ಮಾಡುವುದು ಯೋಗ್ಯ.
3. ವೇದವು ಸಮಸ್ತ ಸತ್ಯವಿದ್ಯೆಗಳ ಪುಸ್ತಕವು. ಅವುಗಳನ್ನು ಓದುವುದೂ, ಓದಿಸುವುದೂ, ಕೇಳುವುದೂ, ಹೇಳುವುದೂ ಆರ್ಯರೆಲ್ಲರ ಪರಮಧರ್ಮ.
4. ಸತ್ಯವನ್ನು ಗ್ರಹಿಸುವುದಕ್ಕೂ, ಅಸತ್ಯವನ್ನು ತ್ಯಜಿಸುವುದಕ್ಕೂ ಸದಾ ಸಿದ್ಧರಾಗಿರಬೇಕು.
5. ಎಲ್ಲ ಕಾರ್ಯಗಳನ್ನು ಧರ್ಮಾನುಸಾರವಾಗಿ, ಎಂದರೆ ಸತ್ಯಾಸತ್ಯ ವಿವೇಚನೆ ಮಾಡಿ ಆಚರಿಸಬೇಕು.
6. ಜಗತ್ತಿನ ಉಪಕಾರವನ್ನು, ಅಂದರೆ ಸರ್ವರ ಶಾರೀರಿಕ, ಆತ್ಮಿಕ ಮತ್ತು ಸಾಮಾಜಿಕ ಉನ್ನತಿಯನ್ನು ಸಾಧಿಸುವುದೇ ಮುಖ್ಯ ಉದ್ದೇಶ.
7. ಎಲ್ಲರೊಂದಿಗೆ ಪ್ರೀತಿಪೂರ್ವಕವಾಗಿ, ಧರ್ಮಾನುಸಾರವಾಗಿ ಅವರವರ ಯೋಗ್ಯತೆಗೆ ತಕ್ಕಂತೆ ವರ್ತಿಸಬೇಕು.
8. ಅವಿದ್ಯೆಯ ನಾಶವನ್ನೂ, ವಿದ್ಯೆಯ ಅಭಿವೃದ್ಧಿಯನ್ನೂ ಸಾಧಿಸಬೇಕು.
9. ಕೇವಲ ತನ್ನ ಉನ್ನತಿಯಿಂದ ಯಾವನೂ ಸಂತುಷ್ಟನಾಗಬಾರದು. ಅದರೆ, ಸರ್ವರ ಉನ್ನತಿಯಲ್ಲಿಯೇ ತನ್ನ ಉನ್ನತಿಯು ಸನ್ನಿಹಿತವಾಗಿದೆಯೆಂದು ತಿಳಿಯಬೇಕು.
10.ಸಾಮಾಜಿಕ ಸರ್ವಹಿತಕಾರಿ ನಿಯಮಗಳ ಪಾಲನೆಯಲ್ಲಿ ಮಾನವರೆಲ್ಲರೂ ಪರತಂತ್ರರಾಗಿರಬೇಕು ಮತ್ತು ವೈಯಕ್ತಿಕ ಹಿತಕಾರಿ ನಿಯಮದ ವಿಷಯದಲ್ಲಿ ಸರ್ವರೂ ಸ್ವತಂತ್ರರಾಗಿರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ