ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಆಗಸ್ಟ್ 9, 2010

ವೇದೋಕ್ತ ಜೀವನ ಪಥ:ಜೀವನ ಬುನಾದಿ -13

     ಈ ಶ್ರದ್ಧಾ-ಮೇಧಾ ಸಮನ್ವಯ ವೇದಗಳ ವೈಶಿಷ್ಟ್ಯ. ವೇದಾನುಯಾಯಿಗಳ ಗುರುಮಂತ್ರವಾದ ಗಾಯತ್ರೀ ಜೀವನದ ಉತ್ಕರ್ಷದ ದಿಕ್ಕನ್ನು ತೋರಿಸುತ್ತದೆ.


ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋ ನಃ ಪ್ರಚೋದಯಾತ್|| (ಯಜು.36.3)


     [ಸವಿತುಃ ದೇವಸ್ಯ] ಸೃಜನ ಕರ್ತೃವೂ ಪ್ರೇರಕನೂ ಆದ, ಪ್ರಕಾಶಮಯ ಪ್ರಭುವಿನ [ತತ್ ವರೇಣ್ಯಂ ಭರ್ಗಃ] ಆ ಸ್ವೀಕರಣೀಯವಾದ, ಪಾಪಭಸ್ಮಕಾರಿಯಾದ ತೇಜಸ್ಸನ್ನು, [ಧೀಮಹಿ] ಧ್ಯಾನಿಸುತ್ತೇವೆ, ದರಿಸುತ್ತೇವೆ. [ಯಃ] ಆ ಸ್ವಾಮಿಯು [ನಃ ಧಿಯಃ] ನಮ್ಮ ಬುದ್ಧಿಗಳನ್ನು ಹಾಗೂ ಕರ್ಮಗಳನ್ನು [ಪ್ರಚೋದಯಾತ್] ಪ್ರೇರಿಸಲಿ.

1 ಕಾಮೆಂಟ್‌: