ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜೂನ್ 2, 2010

ವೇದೋಕ್ತ ಜೀವನಪಥ - ಜೀವನ ಬುನಾದಿ -೨


ನೈಮಿತ್ತಿಕ ಜ್ಞಾನದ ಅನಿವಾರ್ಯತೆ ಬಗ್ಗೆ ಪಂ. ಸುಧಾಕರ ಚತುರ್ವೇದಿಯವರ ಮಾತು:

     ನೈಮಿತ್ತಿಕ ಜ್ಞಾನ ಗುರುಹಿರಿಯರಿಂದ, ಋಷಿಮುನಿಗಳಿಂದ, ವಿದ್ವಜ್ಜನರಿಂದ ನಮಗೆ ಲಭಿಸಬಹುದು; ವಿಶ್ವದ ವಿವಿಧ ಘಟನೆಗಳನ್ನು ನೋಡುವುದರಿಂದ ಹಾಗೂ ಕೇಳುವುದರಿಂದ,ಇಲ್ಲವೇ ಆ ಘಟನೆಗಳಲ್ಲಿ ಭಾಗವಹಿಸುವುದರಿಂದ ಲಭಿಸಬಹುದು. ಈ ಬಗೆಯ ನೈಮಿತ್ತಿಕ ಜ್ಞಾನ ಸಾಮಾನ್ಯ ದೃಷ್ಟಿಯಿಂದ ನೋಡಿದಾಗ, ಜಗತ್ತಿನಲ್ಲಿ ಸಾಧಾರಣತಃ ಗೌರವದಿಂದ ಜೀವಿಸಲು ಸಾಕಾದಷ್ಟು ಸಾಮರ್ಥ್ಯವನ್ನು ಮಾನವನಿಗೆ ಒದಗಿಸಲೂಬಹುದು. ಆದರೆ ಇನ್ನೂ ಗಂಭೀರ ದೃಷ್ಟಿಯಿಂದ ಅವಲೋಕಿಸಿದಾಗ ಈ ಬಗೆಯ ನೈಮಿತ್ತಕಜ್ಞಾನ ಇಂದ್ರಿಯಗಮ್ಯವಾದ ಭೌತಿಕವಸ್ತುಗಳಲ್ಲೇ ಸಂಚರಿಸುತ್ತದಯೇ ಹೊರತು, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ - ಮೊದಲಾದ ತತ್ವಗಳ ಆಂತರ್ಯವನ್ನು ಸ್ಪರ್ಶಿಸಲಾರದು - ಎಂಬಂಶ ಸ್ಫುಟವಾಗಿ ಗೋಚರಿಸುತ್ತದೆ. ವಿಕಸಿತ ಮನಸ್ಕನಾದ ಮಾನವನ ಜೀವನಕ್ಕೆ ಕೇವಲ ಇಂದ್ರಿಯಗಮ್ಯಗಳಾದ ಪದಾರ್ಥಗಳ ನೆರವೇ ಸಾಲದು; ಅತೀಂದ್ರಿಯ ತತ್ವಗಳ ಆಶ್ರಯವೂ ಬೇಕೇ ಬೇಕು. ಆದಕಾರಣ ಅನ್ಯಜೀವರಿಂದ ಹಾಗೂ ವಿಶ್ವದಆಗು ಹೋಗುಗಳಿಂದ ಲಭಿಸುವ ನೈಮಿತ್ತಿಕ ಜ್ಞಾನಕ್ಕಿಂತ ಮಿಗಿಲಾಗಿ, ದಿವ್ಯ ನೈಮಿತ್ತಿಕ ಜ್ಞಾನ ಮಾನವನ ಜೀವನದ ಪರಿಪೂರ್ಣ ವಿಕಾಸಕ್ಕೆ ಆವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಆಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ