ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.
ಹರಿಹರಪುರ ಶ್ರೀಧರ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹರಿಹರಪುರ ಶ್ರೀಧರ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 7, 2014

ಸಾವಿರಾರು ಜನರಿಂದ ಸಾಮೂಹಿಕ ಅಗ್ನಿಹೋತ್ರ

Photo: ಹಾಸನದ ವೇದಭಾರತಿಯು ನಡೆಸುವ ದೈನಂದಿನ  ಅಗ್ನಿಹೋತ್ರವನ್ನು ವೀಕ್ಷಿಸಿದ    ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ  ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ   ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು  ವೇದಭಾರತಿಯ ಸಂಚಾಲಕತ್ವದಲ್ಲಿ  ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು  ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ  ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ  ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ  ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು  ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ  ಸಂಪರ್ಕಿಸಬಹುದು.

ಮಂತ್ರದ ಡೌನ್ ಲೋಡ್ ಗಾಗಿ ಕೊಂಡಿ

http://www.divshare.com/download/26086812-18b



      ಹಾಸನದ ವೇದಭಾರತಿಯು ನಡೆಸುವ ದೈನಂದಿನ ಅಗ್ನಿಹೋತ್ರವನ್ನು ವೀಕ್ಷಿಸಿದ ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು ವೇದಭಾರತಿಯ ಸಂಚಾಲಕತ್ವದಲ್ಲಿ ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ ಸಂಪರ್ಕಿಸಬಹುದು.

ಮಂಗಳವಾರ, ಡಿಸೆಂಬರ್ 11, 2012

ಚನ್ನರಾಯಪಟ್ಟಣದಲ್ಲಿ ವೇದಾಭ್ಯಾಸ

ಚನ್ನರಾಯಪಟ್ಟಣದ ವೇದಾಭ್ಯಾಸಿಗಳು ಪಠಿಸುತ್ತಿರುವ ಪುರುಷ ಸೂಕ್ತ


     ಹಿರಿಯರೊಡನೆ ಪುಟಾಣಿಗಳೂ ಸ್ವರಬದ್ಧವಾಗಿ ಮಂತ್ರಪಠಣ ಮಾಡುತ್ತಿದ್ದುದು ಮನಸ್ಸಿಗೆ ಮುದ ನೀಡಿತು. ಈ ವಿಡಿಯೋ ಚಿತ್ರೀಕರಿಸಿದ ಮಿತ್ರ ಹರಿಹರಪುರ ಶ್ರೀಧರರಿಗೆ ಧನ್ಯವಾದ.

ಭಾನುವಾರ, ಡಿಸೆಂಬರ್ 9, 2012

ಸಾಪ್ತಾಹಿಕ ವೇದಪಾಠ - 18.11.2012


     ದಿನಾಂಕ 18.11.2012 ರಂದು ನಡೆದ ವೇದಪಾಠವನ್ನು ಇಲ್ಲಿ ಪ್ರಕಟಿಸಲಾಗಿದೆ. ಮೇಲ್ ಮೂಲಕ ವಿಳಾಸ ನೀಡಿರುವ    ಎಲ್ಲರಿಗೂ ಪಾಠವನ್ನು ಕಳಿಸಲಾಗಿದೆ. ತಲುಪದಿದ್ದವರು ತಿಳಿಸಿದರೆ ಪುನ: ಕಳಿಸಿಕೊಡಲಾಗುವುದು. ಹೊಸದಾಗಿ  ಸಾಪ್ತಾಹಿಕ ವೇದ ಪಾಠವನ್ನು ವೆಬ್ ಸೈಟ್ ಮೂಲಕ ಕಲಿಯಬಯಸುವವರು " ವೇದಪಾಠ" ಲೇಬಲ್ ಮೇಲೆ ಕ್ಲಿಕ್ ಮಾಡಿ ಮೊದಲ ಪಾಠದಿಂದ ಅನುಸರಿಸಬಹುದು. ಆರಂಭದಲ್ಲಿರುವ ಪರಿಚಯ ಉಪನ್ಯಾಸವನ್ನು ಕೇಳಿ ವೇದಪಾಠವನ್ನು ಆರಂಭಿಸುವುದು ಸೂಕ್ತ. ಹಾಸನದಲ್ಲಿ ನಡೆಯುತ್ತಿರುವ "ಎಲ್ಲರಿಗಾಗಿ ವೇದ ಪಾಠವು" ಪೂರ್ಣ ಉಚಿತವಾಗಿದ್ದು ಹಾಸನಕ್ಕೆ ಸಮೀಪ ಇರುವ ನಿಮ್ಮ ಮಿತ್ರರನ್ನು  ಪ್ರತ್ಯಕ್ಷ ವೇದಪಾಠದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ನಮ್ಮ ವಿಳಾಸ:
ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ.
ಸಂಪರ್ಕ ದೂರವಾಣಿ: 08172-250566/9663572406













-ಹರಿಹರಪುರ ಶ್ರೀಧರ್.

ಸೋಮವಾರ, ಆಗಸ್ಟ್ 27, 2012

ಹಾಸನದಲ್ಲಿ ವೇದಪಾಠದ ಶುಭಾರಂಭ







     ಹಾಸನ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳನ್ನು ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.
‘ಮನುಜ ಮತಕ್ಕಾಗಿಯೇ ವೇದ ಪಥವಿದೆ’: ಶರ್ಮಾಜಿ
ಹಾಸನ, ಆ. ೧೯: ವೇದಗಳು ಯಾವುದೇ ಜಾತಿ, ಮತ, ಲಿಂಗ ಇತ್ಯಾದಿಗಳಿಗೆ ಸೀಮಿತವಾದುವಲ್ಲ; ವೇದಗಳು ಈ ಜಗತ್ತಿನ ಎಲ್ಲರಿಗಾಗಿಯೂ ಇವೆ; ಮನುಜ ಮತಕ್ಕಾಗಿಯೇ ವೇದ ಪಥವಿದೆ; ಸರ್ವರೂ ಇವುಗಳನ್ನು ಅರ್ಥ ಸಹಿತ ಅಧ್ಯಯನ ಮಾಡಿ ಆಚರಣೆಗೆ ತಂದಲ್ಲಿ ನಿಜಕ್ಕೂ ಮನುಕುಲ ಉದ್ಧಾರವಾಗುತ್ತದೆ ಎಂದು ಬೇಲೂರಿನ ಸಂಸ್ಕೃತ ಪಾಠಶಾಲೆ ಆಚಾರ್ಯರಾದ ವೇದಾಧ್ಯಾಯಿ ಶ್ರೀ ವಿಶ್ವನಾಥ ಶರ್ಮ ತಿಳಿಹೇಳಿದರು.
ನಗರದ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ವೇದಗಳನ್ನು ಅರಿಯದವರು, ಮತ್ತು ಅವುಗಳ ಕುರಿತು ಪ್ರಾಥಮಿಕ ಜ್ಞಾನ ಸಹ ಇಲ್ಲದವರು ಪೂರ್ವಾಗ್ರಹ ಪೀಡಿತರಾಗಿ ವಿನಾಕಾರಣ ಅವುಗಳನ್ನು ಟೀಕಿಸುವುದು, ಜರೆಯುವುದು, ಅವುಗಳ ವಿರುದ್ಧ ದ್ವೇಷ ಸಾಧಿಸುವುದು ಮಾಡುತ್ತಾರೆ. ಇಂತಹವರ ವರ್ತನೆಗಳಿಂದೇನೂ ವೇದದ ಹಿರಿಮೆ ಅಥವಾ ಘನತೆ ಖಂಡಿತಾ ಕುಗ್ಗುವುದಿಲ್ಲ. ಆದ್ದರಿಂದ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಭಾವನೆ ಇರುವವರು ಮೊದಲು ವೇದಗಳು ಎಂದರೇನು? ಅವುಗಳಲ್ಲಿ ಏನಿದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು; ವೇದ ಎಂದರೆ ಜ್ಞಾನ ಎಂದು ಅರ್ಥ. ಮನುಷ್ಯನಾದವನು ಹೇಗೆ ತನ್ನ ಬದುಕು ಸಾಗಿಸಬೇಕು ಎಂಬುದನ್ನು ವೇದ ತಿಳಿಸಿಕೊಡುತ್ತದೆ. ಹೀಗಾಗಿ ವೇದ ಮಂತ್ರಗಳನ್ನು ಯಥಾವತ್ತು ಕಲಿಯಲೇಬೇಕು; ಪಠಿಸಲೇಬೇಕು ಎಂದೇನೂ ಇಲ್ಲ; ವೇದಗಳಲ್ಲಿನ ಜ್ಞಾನವನ್ನು ನಮ್ಮದಾಗಿಸಿಕೊಂಡರೂ ಸಾಕು; ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಶರ್ಮಾಜಿ ಕಿವಿಮಾತು ಹೇಳಿದರು.
ವೇದಗಳು ಅವುಗಳದೇ ಆದ ವೇದ ಭಾಷೆಯಲ್ಲಿವೆಯೇ ಹೊರತು ಸಂಸ್ಕೃತದಲ್ಲಿಲ್ಲ. ವೇದ ಭಾಷೆಯಿಂದ ಸಂಸ್ಕೃತ ಹುಟ್ಟಿಕೊಂಡಿದೆ. ಹೀಗಾಗಿ ವೇದದ ಶಬ್ದಗಳಿಗೆ ಅದರದೇ ಆದ ವೈಜ್ಞಾನಿಕ ಅರ್ಥಗಳಿವೆ. ಈ ಅರ್ಥಗಳನ್ನು ವಿವರಿಸಲಿಕ್ಕಾಗಿಯೇ ನಿರುಕ್ತ ಎಂಬ ವೇದಾಂಗವಿದೆ. ಜಾತಿ, ವರ್ಣ ಇತ್ಯಾದಿ ಶಬ್ದಗಳಿಗೆ ವೇದಗಳು ನೀಡುವ ಅರ್ಥಗಳೇ ಬೇರೆಯಾಗಿವೆ. ಜೀವವೊಂದು ಹುಟ್ಟುವ ವಿಧಾನವೇ ‘ಜಾತಿ’ ಎನಿಸಿಕೊಳ್ಳುತ್ತದೆ. ಮನುಷ್ಯನಾಗಿ ಹುಟ್ಟಿದರೆ ಮನುಷ್ಯ ಜಾತಿ; ಕುರಿ; ಕೋಳಿಯಾಗಿ ಹುಟ್ಟಿದರೆ ಅವುಗಳದ್ದೇ ಜಾತಿ ಅಷ್ಟೇ ಹೊರತು ಈಗ ನಾವು ವಿಂಗಡಿಸಿರುವ ಬ್ರಾಹ್ಮಣ, ಲಿಂಗಾಯಿತ, ಕುರುಬ ಇತ್ಯಾದಿಗಳಿಗೆ ಅರ್ಥವಿಲ್ಲ. ಅದೇ ರೀತಿ ವರ್ಣ ಎಂದರೆ ‘ಆರಿಸಿಕೊಳ್ಳುವುದು’ ಎಂಬ ಅರ್ಥವಿದೆಯೇ ಹೊರತು; ಈಗ ನಾವು ಹೇಳುವ ಜಾತಿ ಆಧಾರಿತ ವರ್ಣಾಶ್ರಮ ವ್ಯಾಖ್ಯಾನಕ್ಕೆ ಅರ್ಥವಿಲ್ಲ ಎಂದು ಅವರು ವಿವರಿಸಿದರು. ನಮ್ಮ ವೇದಗಳಲ್ಲಿನ ಪ್ರತಿಯೊಂದು ಜ್ಞಾನವನ್ನು ಆಚರಣೆಗೆ ತರಲೂ ಸಹ ನಾವು ವಿದೇಶಿಯರನ್ನೇ ಒರೆಗಲ್ಲಾಗಿ ಇಟ್ಟುಕೊಂಡಿರುವುದು ಹಾಗೂ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ತಂದುಕೊಂಡಿರುವುದ ದೊಡ್ಡ ದುರಂತ ಹಾಗೂ ವಿಪರ‍್ಯಾಸ ಎಂದು ಶರ್ಮಾಜಿ ನಿದರ್ಶನಗಳ ಸಹಿತ ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಮಾತನಾಡಿ, ಅರೆಬರೆ ಜ್ಞಾನ ಹೊಂದಿದ ಅಜ್ಞಾನಿಗಳು ಹೇಳುವಂತೆ ವೇದಗಳು ಯಾರ ಸ್ವತ್ತೂ ಅಲ್ಲ; ಅಥವಾ ಅವು ಒಂದು ಪಂಗಡಕ್ಕೆ ಮಾತ್ರ ಸೀಮಿತವೂ ಅಲ್ಲ; ಅದನ್ನು ಯಾರು ಬೇಕಾದರೂ ಕಲಿಯಬಹುದು. ಇವುಗಳನ್ನು ಬರೆದವರು ಯಾರು ಮತ್ತು ಯಾವ ಕಾಲದಲ್ಲಿ ಹುಟ್ಟಿಕೊಂಡವು ಎಂಬ ನಿಖರ ಮಾಹಿತಿ ಇಲ್ಲವಾದ್ದರಿಂದ ವೇದಗಳನ್ನು ‘ಅಪೌರುಷೇಯ’ ಎಂದಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ‘ವೇದ ಸುಧೆ’ ಬ್ಲಾಗ್ ಗೌರವ ಸಂಪಾದಕ ಕವಿ ನಾಗರಾಜ್ ಅವರು ಸ್ವಾಗತಿಸಿದರಲ್ಲದೆ, ಕಲಾವಿದೆ ಕು. ಸ್ವಾತಿ ಭಾರದ್ವಾಜ್ ಪರಿಚಯ ಮಾಡಿಕೊಟ್ಟರು. ಬ್ಲಾಗ್ ಸಂಪಾದಕರಾದ ಹರಿಹರಪುರ ಶ್ರೀಧರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕು. ಸ್ವಾತಿ ತಂದೆ ಪ್ರಕಾಶ್ ಹಾಗೂ ತಾಯಿ ಅನಿತಾ ಪ್ರಕಾಶ್, ಚ.ರಾ. ಪಟ್ಟಣದ ನಾಟ್ಯ ಭೈರವಿ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಚೈತನ್ಯ ಶಾಲೆ ಮುಖ್ಯಸ್ಥ ರಮೇಶ್, ವಾಸವಿ ಶಾಲೆಯ ಜಿ.ಎಸ್. ಮಂಜುನಾಥ್ ಮತ್ತಿತರರು ಹಾಜರಿದ್ದರು.













ಹಾಸನ  ದಲ್ಲಿ  ಇದೇ ಸಪ್ಟೆಂಬರ್ 30 ರಂದು ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಪಾಲ್ಗೊಳ್ಳಲಿದ್ದು  ಪ್ರಶ್ನೆಗಳನ್ನು ಕಲಿಸುವವರು ಮತ್ತು ವೇದ ಪಾಠಗಳ ಕುರಿತು ಆಸಕ್ತಿ ಇರುವವರು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜ್ 9448501806   ಅಥವಾ ಸಂಪಾದಕರಾದ ಶ್ರೀ ಹರಿಹರಪುರಶ್ರೀಧರ್  9663572406 ಅವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ದೃಶ್ಯಾವಳಿಗಾಗಿ ಕೊಂಡಿ ಇಲ್ಲಿದೆ.


ವರದಿ:ಹೆಚ್.ಎಸ್. ಪ್ರಭಾಕರ್,ಹಿರಿಯ ಪತ್ರಕರ್ತರು,ಹಾಸನ


ಗುರುವಾರ, ಆಗಸ್ಟ್ 9, 2012

ಒಂದು ಅಪರೂಪದ ವೇದೋಕ್ತ ವಿವಾಹ

  
     “ವೇದಾಧ್ಯಾಯೀ  ಶ್ರೀ ಸುಧಾಕರಶರ್ಮಾರವರು ಮಂತ್ರಗಳ ಅರ್ಥ-  ವಿವರಣೆಗಳನ್ನು ನೀಡುತ್ತಾ ವೈದಿಕ ವಿವಾಹ ಸಂಸ್ಕಾರವನ್ನು ನೀಡಲಿದ್ದಾರೆ.  ತಾವು ಇಡೀ ಕಾರ್ಯಕ್ರಮದಲ್ಲಿ ಶಾಂತರೀತಿಯಿಂದ ಭಾಗವಹಿಸಬೇಕಾಗಿ ಸವಿನಯ ಪ್ರಾರ್ಥನೆ” - ಎಂದು ಆಹ್ವಾನಪತ್ರಿಕೆಯಲ್ಲಿಯೇ ಮುದ್ರಿಸಿ ಹಂಚುವುದರಿಂದ ವಿಶೇಷತೆಗಳ ಪ್ರಾರಂಭ.  ಅಂತೆಯೇ 05.08.2012 ರಂದು ಬೆಂಗಳೂರಿನಲ್ಲಿ ಚಿ.ಸ್ಮೃತಿ ಆರ್ಯ (ಕನಕಪುರದ ಶ್ರೀ ಬಾಲಕೃಷ್ಣ ಆರ್ಯ ಮತ್ತು ಶ್ರೀಮತಿ ಸನ್ಮತಿ ಆರ್ಯ ಇವರ ಮಗಳು) ಮತ್ತು ಚಿ.ಸುಮಂತ್ ಭಾರದ್ವಾಜ್‌ರವರ (ಕೆ.ಜಿ.ಎಫ್.ನ ಶ್ರೀ ಸೂರ್ಯನಾರಾಯಣ್ ಮತ್ತು ಶ್ರೀಮತಿ ನಿರ್ಮಲ ಇವರ ಮಗ) ವೈದಿಕ ವಿವಾಹ ನೆರವೇರಿತು.  
     ಸಭೆಯಲ್ಲಿದ್ದವರೆಲ್ಲರೂ ‘ಓಂ’ಕಾರವನ್ನು ಒಟ್ಟಿಗೆ ಉಚ್ಚರಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.  ಎರಡು ನೀರುಗಳು ಬೆರೆಯುವಂತೆ, ತಮ್ಮ ತಮ್ಮ ಹೃದಯಗಳನ್ನು ಬೆಸೆಯುವ ತಮ್ಮ ಸಂಕಲ್ಪವನ್ನು ನೆರೆದ ಹಿರಿಯರು, ಗೃಹಸ್ಥ-ಗೃಹಿಣಿಯರು, ವಿದುಷಿ, ವಿದ್ವಾಂಸರ ಸಮ್ಮುಖದಲ್ಲಿ ವಧೂ-ವರರು ಪ್ರಕಟಿಸಿದರು.  ಕುಟುಂಬವೆಂಬ ಇಟ್ಟಿಗೆಗಳಿಂದ ಆದದ್ದೇ ಸಮಾಜ/ರಾಷ್ಟ್ರವೆಂಬ ಕಟ್ಟಡ.  ಇಡಿಯು ಸುಭದ್ರವಾಗಿದ್ದಾಗ ಮಾತ್ರ ಅದರೊಳಗಣ ಬಿಡಿಯೂ ನೆಮ್ಮದಿಯಿಂದಿರಬಹುದು.  ನೂತನ ಕುಟುಂಬವನ್ನು ಆರಂಭಿಸುತ್ತಿರುವ ದಂಪತಿಗಳಿಗೆ ಈ ಬಗ್ಗೆ ಮಾರ್ಗದರ್ಶನ ನೀಡುವುದೇ ‘ರಾಷ್ಟ್ರಭೃತ್ ಯಜ್ಞ’.  ಜೀವನದಲ್ಲಿ ಜಯವನ್ನು ಸಾಧಿಸುವುದಕ್ಕಾಗಿ ಸಂಕಲ್ಪಶಕ್ತಿಯನ್ನು ಒಡಮೂಡಿಸುವದೇ ‘ಜಯಾ ಹೋಮ’.  ಸದ್ವಿಚಾರ, ಸದಾಚಾರಗಳನ್ನು ಎಲ್ಲೆಡೆಯೂ ಹರಡುವ ಅವಶ್ಯಕತೆಯ ಅರಿವನ್ನು ಮೂಡಿಸುವುದೇ ‘ಅಭ್ಯಾತನ ಹೋಮ’.  ಪಾಣಿಗ್ರಹಣ - ವರನು ವಧುವಿನ ಕೈಹಿಡಿದು ಮುಂದಿನ ಜೋಡಿಜೀವನದಲ್ಲಿ ತಾನು ಅನುಸರಿಸುವ ರೀತಿ-ನೀತಿಗಳ ವಿಷಯದಲ್ಲಿ ಪ್ರತಿಜ್ಞೆಗಳನ್ನು ಮಾಡುವುದು.  ‘ಧರ್ಮದ ಹೆಸರಿನಲ್ಲಿ, ಮುಪ್ಪಿನಕಾಲದವರೆಗಿನ ಸಹಬಾಳ್ವೆಗಾಗಿ ನಿನ್ನ ಕೈ ಹಿಡಿಯುತ್ತಿದ್ದೇನೆ. ಕಳ್ಳತನದಲ್ಲಿ ಯಾವುದೇ ಭೋಗವನ್ನು ಅನುಭವಿಸುವುದಿಲ್ಲ.  ಯಾವುದೇ ಮೋಹಗಳಿಗೆ ಒಳಗಾಗದೇ ನಿನ್ನನ್ನು ವರಿಸುತ್ತಿದ್ದೇನೆ’ - ಇದು ಸಾರಾಂಶ.  ಇದಕ್ಕೆ ಪ್ರತಿಯಾಗಿ ಕನ್ಯೆಯು ವರನಿಗೆ ನೀಡುವ ಮಾತುಗಳೇ ‘ಲಾಜಾಹೋಮ’.  ‘ತವರು ಮನೆಯಿಂದ ಬೇರ್ಪಟ್ಟು, ನಿಮ್ಮ ಕುಟುಂಬದ ಸದಸ್ಯೆಯಾಗುತ್ತಿದ್ದೇನೆ.  ಎರಡೂ ಮನೆಯವರು ಸುಖ-ಸಂತೋಷಗಳಿಂದ ಬಾಳಲು ನನ್ನ ಕಾಣಿಕೆಯನ್ನು ನೀಡುತ್ತೇನೆ.  ಇದನ್ನು ಅರಳಿದ ಮನಸ್ಸಿನಿಂದ ವ್ಯಕ್ತಪಡಿಸುತ್ತಿದ್ದೇನೆ’.  
     ‘ಇಷ ಏಕಪದೀ ಭವ’ - ಇಚ್ಛಾಶಕ್ತಿ, ಅನ್ನಾಹಾರಗಳ ಸಲುವಾಗಿ ಮೊದಲನೆಯ ಹೆಜ್ಜೆ.  ‘ಊರ್ಜೇ ದ್ವಿಪದೀ ಭವ’ - ಬಲ, ಆರೋಗ್ಯಗಳಿಗಾಗಿ ಎರಡನೆಯ ಹೆಜ್ಜೆ.  ‘ರಾಯಸ್ಪೋಷಾಯ ತ್ರಿಪದೀ ಭವ’ - ಸಾಧನ ಸಂಪತ್ತಿಗಾಗಿ, ಇಂತಹ ಸಾಧನಗಳ ಪ್ರಾಮಾಣಿಕ ಸಂಗ್ರಹಣೆ, ರಕ್ಷಣೆ, ಸದುಪಯೋಗಗಳಿಗಾಗಿ ಮೂರನೆಯ ಹೆಜ್ಜೆ.  ‘ಮಯೋಭವ್ಯಾಯ ಚತುಷ್ಪದೀ ಭವ’ - ಸುಖ, ಆನಂದಕ್ಕಾಗಿ ನಾಲ್ಕನೇ ಹೆಜ್ಜೆ.  ‘ಪ್ರಜಾಭ್ಯಃ ಪಂಚಪದೀ ಭವ’ - ಉತ್ತಮ ಸಂತಾನಕ್ಕಾಗಿ ಐದನೆಯ ಹೆಜ್ಜೆ.  ‘ಋತುಭ್ಯಃ ಷಟ್ಪದೀ ಭವ’ - ನಿಯಮಿತಜೀವನಕ್ಕಾಗಿ ಆರನೆಯ ಹೆಜ್ಜೆ.  ‘ಸಖಾ ಸಪ್ತಪದೀ ಭವ’ - ಸ್ನೇಹಕ್ಕಾಗಿ ಏಳನೆಯ ಹೆಜ್ಜೆ.  ಸಹಕಾರ, ತ್ಯಾಗ, ಸಮಾನತೆ, ಹೊಂದಾಣಿಕೆ, ಪ್ರೀತಿ, ಪ್ರೇಮ, ವಿಶ್ವಾಸ ಮೊದಲಾದವುಗಳೇ ಈ ಸ್ನೇಹದ ತಿರುಳು.  ಹೀಗೆ ಒಟ್ಟಿಗೆ ಏಳು ಹೆಜ್ಜೆಗಳನ್ನು ಇಟ್ಟ ಇವರು ಸತಿ-ಪತಿಗಳಾದರು.  ನೂತನ ದಂಪತಿಗಳಿಗೆ ಬೇಕಾದ ಸಲಹೆ, ಸಹಕಾರ, ಮಾರ್ಗದರ್ಶನಗಳನ್ನು ಕೊಡುತ್ತೇವೆಂದು ಸಭೆಯಲ್ಲಿದ್ದ ಹಿರಿಯರು ಆಶೀರ್ವಾದದ ರೂಪದಲ್ಲಿ ಆಶ್ವಾಸನೆಯನ್ನು ನೀಡಿದರು.  
     ಪ್ರತಿಯೊಬ್ಬ ಗೃಹಸ್ಥ-ಗೃಹಿಣಿಯರು ದಿನನಿತ್ಯವೂ ತಮ್ಮ ಮನೆಗಳಲ್ಲಿ ಪಾಲಿಸಲೇಬೇಕಾದ ಐದು ಮಹಾಯಜ್ಞಗಳ ಬಗ್ಗೆ ಪ್ರವಚನ ನೀಡಲಾಯಿತು. ಬ್ರಹ್ಮಯಜ್ಞ - ಜ್ಞಾನಾಭಿವೃದ್ಧಿಗಾಗಿ ನಿಯಮಿತ ಪ್ರಯತ್ನ.  ದೇವಯಜ್ಞ - ಪರಿಸರಶುದ್ಧಿಗಾಗಿ ಅಗ್ನಿಹೋತ್ರ.  ಪಿತೃಯಜ್ಞ - ಬದುಕಿರುವ ತಂದೆ-ತಾಯಿ, ಅತ್ತೆ-ಮಾವ, ಪಾಲಕ-ಪೋಷಕರ ಸೇವೆಯನ್ನು ಸ್ವತಃ, ಶ್ರದ್ಧೆಯಿಂದ ಮಾಡುವುದು.  ಅತಿಥಿಯಜ್ಞ - ಜ್ಞಾನಪ್ರಚಾರ, ಪ್ರಸಾರಕ್ಕಾಗಿ ಅಲೆಯುವ ಜ್ಞಾನಿಯು ಇದ್ದಕ್ಕಿದ್ದಂತೆ ಮನೆಗೆ ಬಂದಲ್ಲಿ, ಸತ್ಕರಿಸಿ, ಸದುಪದೇಶವನ್ನು ಪಡೆಯುವುದು.  ಬಲಿವೈಶ್ವದೇವಯಜ್ಞ - ನಮ್ಮ ಆಹಾರ, ಸಂಪತ್ತಿನಲ್ಲಿ ಸ್ವಲ್ಪಭಾಗವನ್ನು, ಇತರ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳೊಂದಿಗೆ, ದೀನ, ದುರ್ಬಲ, ಅಸಹಾಯಕರೊಂದಿಗೆ ಹಂಚಿಕೊಳ್ಳುವುದು.
     ಮಂಗಲನಿಧಿ ಸಮರ್ಪಣೆ.  ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸೇವಾಸಂಸ್ಥೆಗಳಿಗೆ ಕಿರುಕಾಣಿಕೆಯನ್ನು ಸಲ್ಲಿಸುವಿಕೆ.  ಆರ್ಯಸಮಾಜ (ವೇದಪ್ರಚಾರ), ಓಂ ಶಾಂತಿಧಾಮ (ವೈದಿಕ ಗುರುಕುಲ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಸಂಘಟನೆ), ಮಂಗಳ ಶಿಕ್ಷಣ ಸಮಿತಿ (ಶಿಕ್ಷಣ), ಭಾರತ್ ಸ್ವಾಭಿಮಾನ ಟ್ರಸ್ಟ್ (ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರೀಯ ಆಂದೋಳನ) - ಇವುಗಳ ಪ್ರತಿನಿಧಿಗಳನ್ನು ವೇದಿಕೆಗೆ ಕರೆಸಿ, ಗೌರವಿಸಿ, ಕಾಣಿಕೆಯನ್ನು ಸಲ್ಲಿಸಲಾಯಿತು.
     ಶತಾಯುಷೀ ವೇದವಿದ್ವಾಂಸರಾದ ಪಂಡಿತ ಸುಧಾಕರ ಚತುರ್ವೇದಿಗಳು ನೂತನ ದಂಪತಿಗಳನ್ನು ಆಶೀರ್ವದಿಸುತ್ತಾ ‘ವಿಶೇಷವಾದ ಹೊಣೆಗಾರಿಕೆಗಳನ್ನು ಸ್ವೀಕರಿಸುದೇ ವಿವಾಹ.  ಈ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನೂತನ ದಂಪತಿಗಳು ನೆರವೇರಿಸುವಂತಾಗಲಿ’ ಎಂದು ಆಶೀರ್ವದಿಸಿದರು.
   ಸಭೆಯಲ್ಲಿದ್ದವರೆಲ್ಲರೂ ಎಲ್ಲರಿಗೂ ಶಾಂತಿಯನ್ನು ಕೋರುತ್ತಾ ‘ಶಾಂತಿಪಾಠ’ವನ್ನು ಪಠಿಸುವುದರೊಂದಿಗೆ ವೈದಿಕ ವಿವಾಹ ಸಂಸ್ಕಾರವು ಸಂಪನ್ನವಾಯಿತು.  ಇದೊಂದು ಅನುಕರಣೀಯ ಸಮಾರಂಭ. ಅರ್ಥಪೂರ್ಣವಾಗಿ, ವಿಚಾರಾತ್ಮಕವಾಗಿ, ಬೋಧಪ್ರದವಾಗಿ ಕಾರ್ಯಕ್ರಮವನ್ನು ನಿರ್ದೇಶಿಸಿದ ಶ್ರೀ ಸುಧಾಕರಶರ್ಮಾರವರು ಸಂಗ್ರಹಿಸಿದ ವೇದಸೂಕ್ತಿ,   ಚಂದನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 9.30 ರಿಂದ10.00 ರವರೆಗೆ ಮೂಡಿಬರುತ್ತಿರುವ “ಹೊಸಬೆಳಕು’ ಕಾರ್ಯಕ್ರಮದಲ್ಲಿ ವೇದಗಳ ವಿಶಾಲ ಮಾನವೀಯ ಚಿಂತನೆ, ಮಾರ್ಗದರ್ಶನಗಳನ್ನು ಇವರು ಹಂಚಿಕೊಳ್ಳುತ್ತಿದ್ದಾರೆ.
ವರದಿ: ಶ್ರೀಮತಿ ಬಿ.ಎಸ್.ವಿಜಯಲಕ್ಷ್ಮೀ ಶ್ಯಾಂಪ್ರಸಾದ್.
-----------------------------------------------
ಟಿಪ್ಪಣಿ:
      ಈ ಅಪರೂಪದಲ್ಲಿ ಅಪರೂಪದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಸೌಭಾಗ್ಯ ನನ್ನದಾಗಿತ್ತು.ಇನ್ನಿತರ ವಿವಾಹದ ಸಂದರ್ಭಗಳಲ್ಲಿ ಮದುವೆಯ ಕಲಾಪಗಳು ಅದರ ಪಾಡಿಗೆ ನಡೆಯುತ್ತಿದ್ದು ಭಾಗವಹಿಸಿದವರು ಕೇವಲ ಹಾಜರಾತಿ, ಉಡುಗೊರೆ ನೀಡಿಕೆ, ಊಟ ಮಾಡಿಕೊಂಡು ಹೋಗುವುದು, ಮಿಕ್ಕ ಸಂದರ್ಭದಲ್ಲಿ ಗುಂಪುಕೂಡಿಕೊಂಡು ಹರಟೆಗಳಲ್ಲಿ  ತೊಡಗಿಕೊಳ್ಳುವುದು ಸಾಮಾನ್ಯ. ಆದರೆ ಈ ಮದುವೆಯ ಕಲಾಪಗಳನ್ನು ನಿಶ್ಶಬ್ದವಾಗಿ ಆಲಿಸಿದ್ಸಲ್ಲದೆ ಅಗತ್ಯದ ಸಂದರ್ಭಗಳಲ್ಲಿ ಒಪ್ಪಿಗೆ, ಅನುಮತಿ ರೂಪದ ಉದ್ಗಾರಗಳನ್ನು ಎಲ್ಲರೂ ಮಾಡುತ್ತಿದ್ದುದು ವಿಶೇಷವಾಗಿತ್ತು. ಹಾಗೆಂದು ಬಂದವರ ಸಂಖ್ಯೆ ಕಡಿಮೆಯೇನಾಗಿರಲಿಲ್ಲ. ವಿಶೇಷ ರೀತಿಯ ವಿವಾಹವನ್ನು ನೋಡುವ ಸಲುವಾಗಿಯೇ ಬಂದವರು, ಬಂಧು-ಮಿತರ್ರುಗಳ ಬಹು ದೊಡ್ಡ ಸಂಖ್ಯೆಯ ಉಪಸ್ಥಿತಿ ಅಲ್ಲಿತ್ತು.  ಬಂದವರೆಲ್ಲರಿಗೆ ರುಚಿಕರ ಭೋಜನದೊಂದಿಗೆ 'ಬಾಳಿಗೆ ಕೈಗನ್ನಡಿ' ಎಂಬ ಪುಸ್ತಕವನ್ನು ತಾಂಬೂಲವಾಗಿ ನೀಡುವುದರ ಜೊತೆಗೆ ಕುಟುಂಬಕ್ಕೆ ಒಂದರಂತೆ ಔಷಧೀಯ ಗಿಡಗಳ ಸಸಿಗಳನ್ನೂ ಕೊಟ್ಟು ಪರಿಸರ ಪ್ರಜ್ಞೆಯನ್ನೂ ಮೆರೆಯಲಾಯಿತು. ಆ ಸಂದರ್ಭದಲ್ಲಿ ಸೆರೆ ಹಿಡಿದ ಕೆಲವು ದೃಷ್ಯಗಳಿವು:
 -ಕ.ವೆಂ.ನಾಗರಾಜ್.


      ವಿವಾಹದ ಮಹತ್ವ ವಿವರಿಸುತ್ತಿರುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು. ಆಸಕ್ತಿಯಿಂದ ಆಲಿಸುತ್ತಿರುವ ವಧೂವರರು ಮತ್ತು ಅವರ ಕುಟುಂಬದವರು
 ಪರಸ್ಪರ ಬದ್ಧತೆ ಘೋಷಿಸಿದ ವಧೂ ವರರು
 ಲಾಜಾಹೋಮ - ಅರಳಿನಂತೆ ಜೀವನ ಅರಳಲಿ, ವಿಕಸಿತಗೊಳ್ಳಲಿ ಎಂದು ಹಾರೈಕೆ
 ಸಪ್ತಪದಿ ವಿವರಣೆ ಕೇಳುತ್ತಾ ಸಪ್ತಪದಿ ತುಳಿಯಲು ಸಿದ್ಧರಾದರು ವಧೂವರರು
ಮಂಗಳನಿಧಿ ಸಮರ್ಪಣೆ:  ಆರ್ಯಸಮಾಜ (ವೇದಪ್ರಚಾರ), ಓಂ ಶಾಂತಿಧಾಮ (ವೈದಿಕ ಗುರುಕುಲ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಸಂಘಟನೆ), ಮಂಗಳ ಶಿಕ್ಷಣ ಸಮಿತಿ (ಶಿಕ್ಷಣ), ಭಾರತ್ ಸ್ವಾಭಿಮಾನ ಟ್ರಸ್ಟ್ (ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರೀಯ ಆಂದೋಳನ)ಗಳನ್ನು ಪ್ರತಿನಿಧಿಸಿದ ಗಣ್ಯರುಗಳಿಗೆ (ಹಿಂಬದಿಯಲ್ಲಿ ಆಸೀನರಾದವರು) ಮಂಗಳನಿಧಿ ಅರ್ಪಣೆ.
ಶುಭಾಶೀರ್ವಾದ ಮಾಡಿದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರನ್ನೂ ಚಿತ್ರದಲ್ಲಿ ಕಾಣಬಹುದು.

ಮಂಗಳವಾರ, ಜುಲೈ 17, 2012

ನಿಜವಾದ ಶ್ರಾದ್ಧ ಯಾವುದು?

ನಿಮಗೆ ಕೇವಲ ಮೂರು ನಿಮಿಷ ಬಿಡುವಿದೆಯೇ? ಈ ಆಡಿಯೋ ಕೇಳಿ.  ಅನುಭವಿಗಳ ಎರಡು ಮಾತು ಸಾವಿರ ಪುಟದ ಗ್ರಂಥದ ಓದುವುದಕ್ಕಿಂತಲೂ ಮೇಲು.







ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ತಂದೆ ಶ್ರೀ ಚಂದ್ರಶೇಖರ ಶಾಸ್ತ್ರಿಗಳು.ಅವರು ಪ್ರಾಣ ಬಿಡುವಾಗ ಹೇಳಿದ ಮಾತನ್ನು ಶಾಸ್ತ್ರಿಗಳ ಬಾಯಿಯಿಂದಲೇ ಕೇಳಬೇಕು "  ಇನ್ನು ಈ ಶರೀರದ ಕೆಲಸ ಮುಗೀತು. ತೆಗೆದುಕೊಂಡು ಹೋಗಿ ಸುಟ್ಟುಹಾಕು. ಸಾಲಮಾಡಿ    ಶ್ರಾದ್ಧ ಮಾಡಬೇಡ .ಎರಡು ವರ್ಷ ನೀನು ನನ್ನ ಸೇವೆ ಮಾಡಿದ್ದೀಯಲ್ಲಾ! ನನ್ನ ಶ್ರಾದ್ಧ ಮಾಡಿದಂತಾಯ್ತು. ಇನ್ನು ತಾಯ್ನೆಲದ ಋಣ ತೀರಿಸಲು ಒಂದು ಶಾಲೆ ತೆರೆದು ಮಕ್ಕಳಿಗೆ ವಿದ್ಯೆ ಕೊಡು, ಜೊತೆಗೇ ಅನ್ನವನ್ನೂ ಹಾಕು"......... ನನಗೆ  ನನ್ನ ತಂದೆಯ ಸಾವು ನೆನಪಾಯ್ತು. ಸಾಯುವ ಮುಂಚೆ ಅವರು ಹೇಳಿದ ಮಾತು" ಆ ಭಗವಂತ ನಿನಗೆ ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ... " ಈ ಮಾತುಗಳನ್ನು ಹೇಳುವಾಗಲೇ   ಪ್ರಾಣಪಕ್ಷಿ ಹಾರಿಹೋಯ್ತು.
-ಹರಿಹರಪುರ ಶ್ರೀಧರ



ಸೋಮವಾರ, ಮಾರ್ಚ್ 19, 2012

ಬದುಕಿಗೆ ಹೆದರಿ ಓಡಿಹೋಗಬೇಡ - ವೇದಸುಧೆ » Vedasudhe

ಬದುಕು ಕದನವೆಂದಂಜಿ ಬಿಟ್ಟೋಡುವವನು
ವಿಧಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ ಮತಿಗದೆಯ ಪಿಡಿದು
ನೀ ನೆದುರು ನಿಲೆ ಬಿದಿಯೊಲಿವ ಮಂಕು ತಿಮ್ಮ|| 598||
     ಮನುಷ್ಯ ಹುಟ್ಟಿದಮೇಲೆ ಬದುಕು ನಡೆಸಲೇ ಬೇಕು. ಬೇರೆ ಗತಿಯಿಲ್ಲ. ಬದುಕನ್ನು ನಡೆಸಲಾರೆನೆಂದು ಅದಕ್ಕೆ ಅಂಜಿ ಓಡಿಹೋಗುತ್ತೇನೆಂದರೆ ವಿಧಿ ಬಿಟ್ಟೀತೇ? ಬದಲಿಗೆ ಬಂದ ಕಷ್ಟಕಾರ್ಪಣ್ಯಗಳಿಗೆ ಎದೆಯನ್ನು ಉಕ್ಕಿನಂತೆ ಗಟ್ಟಿಮಾಡಿಕೊಂಡು ತನ್ನ ಬುದ್ಧಿಎಂಬ ಗದೆಯನ್ನು ಹಿಡಿದುಕೊಂಡು ಆ ವಿಧಿಗೆ ಎದುರು ನಿಂತರೆ ಆ ವಿಧಿಯೂ ಕೂಡ ತಂತಾನೆ ಒಲಿಯುವುದು, ಆದ್ದರಿಂದ ಪಲಾಯನ ವಾದವನ್ನು ಎಂದಿಗೂ ಮಾಡಬೇಡ.
ಡಾ.ಗುರುರಾಜ ಕರ್ಜಗೆಯವರ ಧ್ವನಿಯಲ್ಲಿ ಈ ಪದ್ಯದ ವಿವರಣೆಯನ್ನು ಕೇಳಿ.
ಕೃಪೆ: ಕನ್ನಡ ಆಡಿಯೋ ಡಾಟ್ ಕಾಮ್
ಇಲ್ಲಿ ಕ್ಲಿಕ್ಕಿಸಿ:
ಬದುಕಿಗೆ ಹೆದರಿ ಓಡಿಹೋಗಬೇಡ - ವೇದಸುಧೆ » Vedasudhe

ಶನಿವಾರ, ಫೆಬ್ರವರಿ 11, 2012

ವೇದ ಯಾರಿಗಾಗಿ?

ವೇದ ತರಂಗ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಶ್ರುತಿಪ್ರಿಯರ ಸಂದರ್ಶನ. ಸಂದರ್ಶಿಸಿದವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮ
-ಹರಿಹರಪುರ ಶ್ರೀಧರ್.

ಸೋಮವಾರ, ಫೆಬ್ರವರಿ 6, 2012

ನೀನು ಮಗನೋ? ಅತಿಥಿಯೋ?


     ಧಾರವಾಡದ ಚಿಂತಕ ಹಾಗೂ ನಿವೃತ್ತ ಶಿಕ್ಷಕ ಶ್ರೀ ಸುರೇಶ ಕುಲಕರ್ಣಿಯವರ ವಿದ್ಯಾರ್ಥಿ ಜೀವನದ ಒಂದು ಘಟನೆ. ರಾತ್ರಿ  ಬಹಳ ಹೊತ್ತು ನಿದ್ರೆಗೆಟ್ಟು ಕೆಲವು ಪೈಂಟಿಂಗ್ ಗಳನ್ನು ಮಾಡಿದ್ದರು. ಬೆಳಗಾಗೆದ್ದಾಗ    ಅಮ್ಮನ ಹತ್ತಿರ ಹೋಗಿ ಅರ್ಧ ಲೋಟ ಚಹಾ ಕೇಳಿದರು. ಅಮ್ಮ ಹೇಳಿದರು. "ಇಲ್ಲ, ಸಕ್ಕರೆ ಖಾಲಿಯಾಗಿದೆ." ಸ್ವಲ್ಪ ಸಮಯ ಕಳೆಯಿತು. ಮನೆಗೆ ಯಾರೋ ಮೂರು ಜನ ಅತಿಥಿಗಳು ಬಂದರು. ಅಮ್ಮ ಅವರನ್ನು ಆದರದಿಂದ ಬರಮಾಡಿಕೊಂಡು ಚಹಾ ಕೊಟ್ಟಿದ್ದೆ ಅಲ್ಲದೆ  ಮಧ್ಯಾಹ್ನ ಊಟ ಮುಗಿಸಿಯೇ ಹೋಗಬೇಕೆಂದು ತಾಕೀತು ಮಾಡಿದ್ದರು. ಇದನ್ನು ಕಂಡ ಸುರೇಶ ಕುಲಕರ್ಣಿಯವರಿಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು. ತಾನು ಕೇಳಿದರೆ ಅಮ್ಮ  ಸಕ್ಕರೆ ಇಲ್ಲವೆಂದು ಚಹಾ ಕೊಡಲಿಲ್ಲ, ಆದರೆ  ಮನೆಗೆ ಬಂದ ಅತಿಥಿಗಳಿಗೆ ಸಂತೋಷ ದಿಂದಲೇ ಚಹಾ ಮಾಡಿಕೊಟ್ಟಳಲ್ಲಾ!! ಅಷ್ಟೇ ಅಲ್ಲ ಮಧ್ಯಾಹ್ನ ಊಟಕ್ಕೂ ಕೀರು ಮಾಡಿ ಬಡಿಸಿದ್ದಳು. ಕುಲಕರ್ಣಿಯವರಿಗೆ ಸಿಟ್ಟು ಇನ್ನೂ ಹೆಚ್ಚಾಯ್ತು. ಅಮ್ಮನ ಮೇಲೆ ಸಿಟ್ಟಾಗಿಯೇ   ಇದ್ದರು. ಅದನ್ನು ಗಮನಿಸಿದ ಅಮ್ಮ  ಒಂದು ಕಪ್ ಚಹಾ ಮಾಡಿಕೊಂಡು ಮಗನಿಗೆ ಕೊಡಲು ಹೋದರು. ಮಗ ಸಿಟ್ಟಾಗಿ "ನನಗೆ ನಿನ್ನ ಚಹಾ ಬೇಡ, ಅದನ್ನು ಮೋರಿಗೆ ಚೆಲ್ಲು!" ಎಂದು ಸಿಟ್ಟಾಗಿ ಹೇಳಿದಾಗ ಅಮ್ಮ ಹಾಗೆಯೇ ಮಾಡಿದರು. ಕಪ್ ತೊಳೆದು ಅದರ ಸ್ಥಾನದಲ್ಲಿರಿಸಿ ಮೌನವಾದರು. 
     ಬಂದ ಅತಿಥಿಗಳು ಮನೆಯಿಂದ ತೆರಳಿದರೂ ಮಗನ ಸಿಟ್ಟು ಇಳಿದಿರಲಿಲ್ಲ. ಮಗನ ಹತ್ತಿರ ಹೋದ ತಾಯಿ ಮಗನನ್ನು ಅಡಿಗೆ ಮನೆಗೆ ಕರೆದು "ಇಲ್ಲಿ ನೋಡೋ,  ಈ ಡಬ್ಬದ ಸಾಲುಗಳಲ್ಲಿ ಮೇಲಿನ ಸಾಲು ಇದೆಯಲ್ಲಾ, ಅದು ಅತಿಥಿಗಳಿಗಾಗಿ ಮೀಸಲಿಟ್ಟ ಡಬ್ಬಗಳು! ನೋಡು ಇವುಗಳಲ್ಲಿ  ಚಹಪುಡಿ, ಸಕ್ಕರೆ, ಬೇಳೆ....ಇತ್ಯಾದಿ  ಅಡಿಗೆಗೆ ಬೇಕಾಗುವ ಎಲ್ಲಾ ಸಾಮಾನುಗಳೂ ಇವೆ. ಪ್ರತಿ ತಿಂಗಳು ಅಂಗಡಿಯಿಂದ ಸಾಮಾನು ಕೊಂಡು ತಂದಾಗ ಎಲ್ಲದರಲ್ಲೂ ಒಂದು ಹಿಡಿಯನ್ನು  ಈ ಡಬ್ಬಗಳಿಗೆ ಮೊದಲು ಹಾಕುವೆ. ನಂತರ ನಮ್ಮ ಮನೆಬಳಕೆಗೆ ಇರುವ ಡಬ್ಬಗಳನ್ನು ತುಂಬಿಸುವೆ. ಯಾವುದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಯಾರೇ ಅತಿಥಿಗಳು ಬಂದರೂ ಅವರ ಆತಿಥ್ಯಕ್ಕೆ ಕಷ್ಟವಾಗಬಾರದು . ಆದರೆ ಇವತ್ತು ಮನೆಬಳಕೆಯ ವಸ್ತುಗಳಲ್ಲಿ ಸಕ್ಕರೆ ಮುಗಿದುಹೋಗಿದೆ. ಅತಿಥಿಗಳಿಗಾಗಿ ಇಟ್ಟಿರುವುದರಲ್ಲಿ ನಿನಗೆ ಚಹಾ ಮಾಡಿಕೊಟ್ಟರೆ ನೀನು ನಮ್ಮ ಮನೆಯ ಅತಿಥಿಯಾಗುತ್ತೀಯೇ. ನೀನು ನಮ್ಮ ಮನೆಯ ಮಗನಾಗಿರಬೇಕೋ ಅಥವಾ  ಅತಿಥಿಯಾಗಬೇಕೋ ? ನೀನೇ ಹೇಳು. ಅದಕ್ಕಾಗಿಯೇ ನೀನು ಚಹಾ ಮೋರಿಗೆ ಚೆಲ್ಲು ಎಂದೊಡನೆಯೇ  ನಾನು ಚೆಲ್ಲಿದೆ. ನನ್ನ ಮಗ ನನಗೆ ಮಗನಾಗಿಯೇ ಇರಬೇಕೆಂಬುದು ನನ್ನಿಚ್ಚೆ!!"

    ಇದಕ್ಕೆ ವಿವರಣೆ ಬೇಕಾ? ನಮ್ಮ ಭಾರತೀಯ ಗೃಹಿಣಿ ಹೇಗಿರಬೇಕೆಂಬುದಕ್ಕೆ ಕುಲಕರ್ಣಿಯವರ ತಾಯಿ ಆದರ್ಶವಲ್ಲವೇ?
-ಹರಿಹರಪುರ ಶ್ರೀಧರ್.               

ಭಾನುವಾರ, ಫೆಬ್ರವರಿ 5, 2012

ಗುಟ್ಟಾಗಿ ಮಾಡಿದ ಪಾಪ

ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕಾ ಗ್ರಂಥದ ಆಯ್ದ ಭಾಗಗಳು
-ಧ್ವನಿ: ಶ್ರೀ ಸೂರ್ಯ ಪ್ರಕಾಶ್ ಪಂಡಿತ್



ಪಾಪವನ್ನು ಗುಟ್ಟಾಗಿ ಮಾಡಿದಾಗ!!


ಕುರುಡನಾರು? ಮೂಕನಾರು? ಕಿವುಡನಾರು?



-ಹರಿಹರಪುರ ಶ್ರೀಧರ್

ಬುಧವಾರ, ಡಿಸೆಂಬರ್ 14, 2011

ಜೀವನ ದರ್ಶನ - ಶ್ರೀ ಸೂರ್ಯಪ್ರಕಾಶ ಪಂಡಿತರ ಪ್ರವಚನದ ಆಯ್ದ ಭಾಗಗಳು

     ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಿರುವ ಅನೇಕ ಸಂಗತಿಗಳ ಬಗ್ಗೆ ಅವನಿಗೆ ಸರಿಯಾದ ಅರಿವೇ ಇರುವುದಿಲ್ಲ. ಯಾವುದು ಸರಿ? ಯಾವುದು ತಪ್ಪು? ಎನ್ನುವ ವಿವೇಚನಾ ಶಕ್ತಿಯೂ ಅವನಿಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವನಿಗೆ ನೆರವಾಗುವುದು ನಮ್ಮ ದಾರ್ಶನಿಕರ ಮಾತುಗಳು.  ದಾರ್ಶನಿಕರಲ್ಲಿ ಶ್ರೇಷ್ಠ ರಾದ ಶ್ರೀಶಂಕರಾಚಾರ್ಯರ ಕೃತಿಗಳನ್ನು ಅಧ್ಯಯನ ಮಾಡಿ ಶ್ರೀ ಶಂಕರರ ವಿಚಾರಧಾರೆಯನ್ನು ಅತ್ಯಂತ ಸರಳವಾಗಿ ನಮ್ಮಂತ ಸಾಮಾನ್ಯರಿಗೆ ಉಣಬಡಿಸುವ ಮಹಾನ್ ಕೆಲಸವನ್ನು ಬೆಂಗಳೂರಿನ ಚಿಂತಕರಾದ ಶ್ರೀ ಸೂರ್ಯ ಪ್ರಕಾಶ ಪಂಡಿತರು ನಿರಂತರವಾಗಿ ಮಾಡುತ್ತಿದ್ದಾರೆ. ಶ್ರೀಯುತರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಪ್ರವಚನದಲ್ಲಿನ ಆಯ್ದ ಭಾಗಗಳು ಇಲ್ಲಿವೆ.



ನರಕ ಎಂದರೇನು?



ಸತ್ಯದ ಪರಿಕಲ್ಪನೆ ಏನು?



ಮೋಕ್ಷ ಎಂದರೇನು?


ಕಾಲದ ಮಹಿಮೆ?



ಚಾರ್ವಾಕ ನೀತಿ


ನಿಜವಾದ ಬಡವನಾರು? ನಿಜ ಶ್ರೀಮಂತ ಯಾರು?


******************
-ಹರಿಹರಪುರ ಶ್ರೀಧರ್.

ಸೋಮವಾರ, ಡಿಸೆಂಬರ್ 12, 2011

ಸ್ವಾಮಿ ಕೃತಾತ್ಮಾನಂದರಿಂದ ಸಂದೇಹ ಪರಿಹಾರ

     18-11-2011ರಂದು ಹರಿಹರಪುರ ಶ್ರೀಧರರ ಮನೆಯಲ್ಲಿ ನಡೆದ ಸತ್ಸಂಗದ ಸಂದರ್ಭದಲ್ಲಿ  ಬಂದವರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರು ನೀಡಿದ ಉತ್ತರ ಇಲ್ಲಿದೆ.




ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ 


ಅಧ್ಯಾತ್ಮ ಮತ್ತು ವಿಜ್ಞಾನದ ಬಗ್ಗೆ



ಪ್ರೇತಾತ್ಮ  ಮೈ ಮೇಲೆ ಬರುತ್ತದೆ, ಅಂತಾರಲ್ಲಾ?


ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?


***********

-ಹರಿಹರಪುರ ಶ್ರೀಧರ್.

ಭಾನುವಾರ, ಡಿಸೆಂಬರ್ 11, 2011

ಸಮತ್ವ

     ಬೆಂಗಳೂರು ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರು ಬಲು ಸರಳ ಯತಿಗಳು. ಜೀವನ ಮೌಲ್ಯಗಳ ಬಗ್ಗೆ  ಬಲು ಸರಳವಾಗಿ ಸಾಮಾನ್ಯ ಜನರಿಗೂ ಮನವರಿಕೆಯಾಗುವಂತೆ ಮಾತನಾಡುತ್ತಾರೆ. "ಸಮತ್ವ" ದ ಬಗ್ಗೆ ಅವರ ಪ್ರವಚನ ಇಲ್ಲಿದೆ.




-ಹರಿಹರಪುರ ಶ್ರೀಧರ್

ವಿನಯ




     ಇತ್ತೀಚಿಗೆ ಹಾಸನದ ಶ್ರೀ ಶಂಕರ ಮಠ ದಲ್ಲಿ ಬೆಂಗಳೂರು ಚಿನ್ಮಯ ಮಿಷನ್ನಿನ ಸ್ವಾಮೀಜಿ ಪೂಜ್ಯ ಕೃತಾತ್ಮಾ ನಂದ ರಿಂದ ಪ್ರವಚನವನ್ನು ಏರ್ಪಡಿಸಲಾಗಿತ್ತು.ಪೂಜ್ಯರು ಮಾನವೀಯ ಮೌಲ್ಯಗಳ ಬಗೆಗೆ ಪ್ರವಚನಗಳನ್ನು ನೀಡಿದರು. ವಿನಯ ಎಂಬ ವಿಷಯದಲ್ಲಿ ಪೂಜ್ಯರು ಮಾಡಿದ ಪ್ರವಚನ ಇಲ್ಲಿದೆ.


-ಹರಿಹರಪುರ ಶ್ರೀಧರ್

ಶನಿವಾರ, ಡಿಸೆಂಬರ್ 3, 2011

ಬೆಳಕು ಮೂಡುತಿದೆ!


'ಹೊಸಬೆಳಕು' ದಾರಾವಾಹಿಯಲ್ಲಿ ಈ ಬಗ್ಗೆ ಶ್ರೀ ಸುಧಾಕರ ಶರ್ಮರ ಮಾತು ಕೇಳಿ. ಅದ್ಭುತ ವಾಗಿದೆ.


ಈ ಜಗತ್ತೇ ಒಂದು ಸಣ್ಣ ಗೂಡು


ಬಹುಪತ್ನಿತ್ವ ವೇದ ಸಮ್ಮತವೇ?



ಸ್ತ್ರೀಯರು ಮತ್ತು ಶೂದ್ರರು ವೇದವನ್ನು ಓದಬಾರದೆಂಬುದು ಮತಾಚಾರ್ಯರ ಅಭಿಪ್ರಾಯ! ಅಂತಾರಲ್ಲಾ , ಇದು ಸರಿಯೇ?



ಭಗವದ್ಗೀತೆಯನ್ನು  ಪಂಚಮ ವೇದ ಅಂತಾರಲ್ಲಾ?



ವೇದದಲ್ಲಿ ಶೂದ್ರರಿಗೆ ಸ್ಥಾನ?



ಸ್ತ್ರೀಯರು ವೇದಮಂತ್ರವನ್ನು ಓದಿದರೆ ಗರ್ಭಕೋಶಕ್ಕೆ ತೊಂದರೆ ಆಗುತ್ತದಂತೆ?



ವಿಧವಾ ವಿವಾಹದ ಬಗ್ಗೆ ವೇದವು ಏನು ಹೇಳುತ್ತದೆ?



-ಹರಿಹರಪುರ ಶ್ರೀಧರ್.

ಗುರುವಾರ, ನವೆಂಬರ್ 24, 2011

ವೇದಾಂತವನ್ನು ಅಭ್ಯಸಿಸುವ ಮುನ್ನ

ಶ್ರೀ ಸೂರ್ಯ ಪ್ರಕಾಶ್ ಪಂಡಿತರು ಇಲ್ಲಿ ಆಡಿರುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬಹುದು.






-ಹರಿಹರಪುರ ಶ್ರೀಧರ್.

ಮಂಗಳವಾರ, ನವೆಂಬರ್ 22, 2011

'ಹೊಸಬೆಳಕು' ಮೂಡುತ್ತಿದೆ! -2

     ದಿನಾಂಕ 20-11-2011ರಂದು ಚಂದನ ದೂರದರ್ಶನದಲ್ಲಿ ಬೆ.9-30ಕ್ಕೆ  ಪ್ರಸಾರವಾದ 'ಹೊಸಬೆಳಕು' ಕಾರ್ಯಕ್ರಮವನ್ನು ಮಿತ್ರ ಹರಿಹರಪುರ ಶ್ರೀಧರರು ದ್ವನಿಮುದ್ರಿಸಿದ್ದು, ಅದನ್ನು ತಮ್ಮ ಶ್ರವಣಕ್ಕಾಗಿ ಇಲ್ಲಿ ಪ್ರಕಟಿಸಿದೆ.
ಅಭಿಪ್ರಾಯಗಳಿಗೆ ಸ್ವಾಗತ!
ಧ್ವನಿ: ಶ್ರೀ ಸುಧಾಕರ ಶರ್ಮ ಮತ್ತು ಶ್ರೀಮತಿ ವಿನಯಾಪ್ರಸಾದ್.

ಶುಕ್ರವಾರ, ನವೆಂಬರ್ 18, 2011

ಸಜ್ಜನರು ಯಾರು? - ಶ್ರೀ ಸೂರ್ಯಪ್ರಕಾಶ ಪಂಡಿತರ ಮಾತು

ಸಜ್ಜನರಾರು?  ಎಂಬ ಬಗ್ಗೆ ಬೆಂಗಳೂರಿನ ಚಿಂತಕ ಶ್ರೀ ಸೂರ್ಯ ಪ್ರಕಾಶ ಪಂಡಿತರ   ಮಾತುಗಳು ಇಲ್ಲಿವೆ.





******************
- ಹರಿಹರಪುರ ಶ್ರೀಧರ್.

ಶುಕ್ರವಾರ, ಅಕ್ಟೋಬರ್ 7, 2011

ಕಲಿಯುತ್ತಾ ಕಲಿಸೋಣ - ಮಾತಾಜಿ ವಿವೇಕಮಯೀ





     ಕಳೆದ ವರ್ಷ ಹಾಸನಜಿಲ್ಲೆಯ ಚನ್ನರಾಯಪಟ್ಟಣದಲ್ಲಿ "ಗುರು ಚಿಂತನ " ಎಂಬ ಒಂದು ವಿನೂತನ ಕಾರ್ಯಕ್ರಮ. ಬೆಂಗಳೂರಿನ ಸಪ್ತಮಿ ಟ್ರಸ್ಟ್ ನವರು ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯೀ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಹಲವೆಡೆ ನಡೆಸುವ ಈ ಕಾರ್ಯಕ್ರಮದಲ್ಲಿ ಒಂದೆರಡು ಭಾರಿ ನಾನು ಭಾಗವಹಿಸಿರುವೆ. ಶಾಲಾ ಶಿಕ್ಷಕರ ಚೈತನ್ಯವನ್ನು ಜಾಗೃತಮಾಡುವ ಈ ಕಾರ್ಯಕ್ರಮಗಳು ಶಿಕ್ಷಕ ಸಮುದಾಯದ ಮೆಚ್ಚುಗೆ ಪಡೆದಿವೆ. ಶಿಕ್ಷಕರುಗಳಿಗಾಗಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಮಾತಾಜಿ ವಿವೇಕಮಯಿಯವರು  ಆಡಿರುವ ಮಾತುಗಳು ನಮಗೂ ಪ್ರೇರಣಾದಾಯಕವೇ ಆಗಿವೆ. 
-ಹರಿಹರಪುರ ಶ್ರೀಧರ್.