ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.
ವೇದ ಪಾಠ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವೇದ ಪಾಠ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಅಕ್ಟೋಬರ್ 16, 2012

ವೇದ ಪಾಠ - 6





ಮನವಿ:  ವೇದಸುಧೆಬಳಗದ ಶ್ರಮ ಸಾರ್ಥಕ ಆಗಬೇಕಾದರೆ ಓದುಗರ  ರೆಸ್ಪಾನ್ಸ್  ಇರಬೇಕು. ಉಪಯೋಗ ವಾಗುತ್ತಿರುವುದು ಖಚಿತವಾದರೆ ಎಷ್ಟಾದರೂ ಶ್ರಮ ಹಾಕುವುದಕ್ಕೆ ವೇದಸುಧೆ ಸಿದ್ಧ.  ಈ ವರಗಿನ ಎಲ್ಲಾ ಪಾಠಗಳನ್ನೂ   ಡಿವ್ ಶೇರ್ ಡಾಟ್ ಕಾಮ್ ಗೆ ಅಪ್ ಲೋಡ್ ಮಾಡಿ ಅದನ್ನು "ವೇದಭಾರತಿ"ಯಲ್ಲಿ ಪ್ರಕಟ್ಸಲಾಗುವುದು. ಅಲ್ಲದೆ ಡೌನ್ ಲೋಡ್ ಲಿಂಕ್ ಕೂಡ ಕೊಡಲಾಗುವುದು. ಪ್ರಯೋಜನ ಪಡೆದವರು ದಯಮಾಡಿ  mail@vedasudhe.com ಗೆ ಸಾಲುತ್ತರ ನೀಡಬೇಕೆಂದು ಕೋರುವೆ.
-ಹರಿಹರಪುರ ಶ್ರೀಧರ್.


ಮಂಗಳವಾರ, ಸೆಪ್ಟೆಂಬರ್ 11, 2012

ವೇದಪಾಠ-5

1.ಮಾತೃ ಭ್ಯೋನಮ:| ಪಿತೃಭ್ಯೋನಮ:| ಆಚಾರ್ಯೇಭ್ಯೋನಮ:| ಶ್ರೀ ಗುರುಭ್ಯೋನಮ:|
ಈ ಮಂತ್ರವನ್ನು ನಾವೆಲ್ಲಾ ಕೇಳಿದ್ದೇವೆ. ನಮಗೆ  ಈ ಮಂತ್ರಗಳು ಎಷ್ಟು ಅರ್ಥವಾಗಿವೆ?  
2. ಮಾತೃ ಭ್ಯೋನಮ:........ಇತ್ಯಾದಿ ಹೇಳುವಾಗ ನಮ್ಮ ಜವಾಬ್ದಾರಿ ಏನು?
3. ಜನಿವಾರ ಏನು ಸೂಚಿಸುತ್ತದೆ?
4. ಭಕ್ತ ಅಂದರೆ ಯಾರು?
5. ಪ್ರಣವ ಅಂದರೇನು?
6. ಓಂಕಾರ ಏಕೆ?
7. ಪೂಜೆ ಅಂದರೇನು?

ಪೂರ್ಣ ಮಾಹಿತಿಗೆ ಮತ್ತು ವೇದಪಾಠಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:
 ವೇದಸುಧೆಡಾಟ್ ಕಾಮ್  

ಭಾನುವಾರ, ಸೆಪ್ಟೆಂಬರ್ 9, 2012

ವೇದ ಪಾಠ-4


ಇಂದು ನಡೆದ ವೇದ ಪಾಠದಲ್ಲಿ ಇಲ್ಲಿರುವ ಮಂತ್ರದ ಪೂರ್ವಾರ್ಧ ಭಾಗವನ್ನು ಮಾತ್ರ ಹೇಳಿಕೊಡಲಾಗಿದೆ. ವೇದ ಪಾಠದ ಆರಂಭದಲ್ಲಿ ರೆಕಾರ್ಡ್ ಮಾಡಿಲ್ಲವಾದ್ದರಿಂದ ಸ್ವರ ಪರಿಚಯ, ಹಾಗೂ ಪಾಠದ ಆರಂಭದ ಭಾಗವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಇದೇ ಪಾಠವನ್ನು ಪುನ: ಮಾಡ ಲಾಗುತ್ತದೆ. ಇಂದು ಗುರುಗಳಾದ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಮಂಗಳೂರಿನಲ್ಲಿ ನಡೆಯುತ್ತಿರುವ ಒಂದು ವೇದ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಅವರ ಶಿಷ್ಯರಾದ ಚನ್ನರಾಯಪಟ್ಟಣದ ಶ್ರೀ ಪ್ರಸಾದ್ ಅವರು ವೇದ ಪಾಠವನ್ನು ಮಾಡಿರುತ್ತಾರೆ. ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ದಿನಾಂಕ 11.9.2012 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ವಿಶೇಷ ಪಾಠವನ್ನು ಮಾಡ ಲಿದ್ದಾರೆ. ಇಂದು ಹೇಳಿಕೊಟ್ಟಿರುವ ಮಂತ್ರದ ಅರ್ಥ-ವಿವರಣೆಯನ್ನು ಕೊಡಲಿದ್ದಾರೆ. ಅದರ ಆಡಿಯೋ ಕ್ಲಿಪ್ ಕೂಡ ಅಳವಡಿಸಲಾಗುವುದು. ಅಲ್ಲದೆ ಸ್ವರಬದ್ಧ ಉಚ್ಚಾರಣೆ ಬಗ್ಗೆಯೂ ತಿಳಿಸಲು ಕೋರಲಾಗುವುದು. ಈ ಮೇಲ್ ಮೂಲಕ ಪಾಠವನ್ನು ಪಡೆಯುತ್ತಿರುವ ಹಾಗೂ ಇದೇ ತಾಣದಮೂಲಕ ಅನುಸರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ವಿನಂತಿ ಏನೆಂದರೆ ನೀವು ಇಲ್ಲಿ ಹೇಳಿಕೊಡುತ್ತಿರುವ ಮಂತ್ರಗಳನ್ನು ಸ್ವರ ತಪ್ಪದಂತೆ ಕಂಠಪಾಠ ಮಾಡುವುದು ಅವಶ್ಯಕ. ಸ್ವರಬದ್ಧ ಉಚ್ಚಾರಣೆಗೆ ನಿತ್ಯ ಅಭ್ಯಾಸ ಅನಿವಾರ್ಯ. ಮಂತ್ರಗಳು ಚಿಕ್ಕದಾದ್ದರಿಂದ "ಏನು ಮಹಾ?" ಎಂಬ ಉದಾಸೀನ ಬೇಡ. ಅಭ್ಯಾಸ ಮಾಡಿದಮೇಲೆ ನಿಮ್ಮ ಧ್ವನಿಯಲ್ಲಿ ರೆಕಾರ್ಡ್ ಮಾಡಿ ಕೇಳಿ ಅಲ್ಲದೆ ಗುರುಗಳ ಪಾಠಕ್ಕೆ ತಾಳೆ ಮಾಡಿಕೊಂಡು ನೋಡಿ. ಶುದ್ಧ ಸ್ವರ ಕ್ಕೆ ಗಮನ ಈಗಲೇ ಕೊಟ್ಟರೆ ಮುಂದೆ ಸುಲಭವಾಗುವುದು. ಹೀಗೂ ಮಾಡಬಹುದು...ನಿಮ್ಮ ಧ್ವನಿಯಲ್ಲಿ ವಿಶ್ವಾನಿ ದೇವ...ಮಂತ್ರವನ್ನು ರೆಕಾರ್ಡ್ ಮಾಡಿ ವೇದಸುಧೆಗೆ ಮೇಲ್ ಮಾಡಿದರೆ ಗುರುಗಳ ಗಮನಕ್ಕೆ ತರಲಾಗುವುದು.
ವೇದಪಾಠ-4 ರ ಆಡಿಯೋ ಗಾಗಿ ಇಲ್ಲಿ  ನೇರವಾಗಿ vedasudhe.com  ಪ್ರವೇಶಿಸಿ.

ಮಂಗಳವಾರ, ಸೆಪ್ಟೆಂಬರ್ 4, 2012

ಗುರುವಾರ, ಆಗಸ್ಟ್ 30, 2012

ವೇದ ಪಾಠ: ಒಂದು ನೋಟ



ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದಲ್ಲಿ ದಿನಾಂಕ 19.8.2012 ಭಾನುವಾರ ಸಾಪ್ತಾಹಿಕ ವೇದಪಾಠವನ್ನು ಆರಂಭ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ಧಿಮಾಡಿದಾಗ ಹಲವರು ದೂರವಾಣಿ ಕರೆಮಾಡಿ ನಮಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಕೆಲವು ಇಲ್ಲಿವೆ


1.ಎಲ್ಲಾ ಜಾತಿಯವರೂ ಬರಬಹುದೇ?

2.ಹೆಂಗಸರೂ ಬರಬಹುದೇ?

3.ಯಾವ ಯಾವ ಮಂತ್ರಗಳನ್ನು ಹೇಳಿಕೊಡುತ್ತಾರೆ?

4.ಪೂಜಾ ಮಂತ್ರವನ್ನೂ ಹೇಳಿಕೊಡುತ್ತಾರಲ್ಲವೇ?

5.ಶುಲ್ಕ?

6.ಇನ್ನೂ ಹಲವು ಪ್ರಶ್ನೆಗಳು.ನನ್ನ ಮಗನಿಗೆ ಈ ವರ್ಷ ಮುಂಜಿ ಮಾಡಿದ್ದೇನೆ. ಅವನನ್ನು ಕಳಿಸುತ್ತೇನೆ...ಇತ್ಯಾದಿ...ಇತ್ಯಾದಿ....

ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ." ಬನ್ನಿ ಎಲ್ಲಾ ತಿಳಿಯುತ್ತೆ"

ಹೌದು, ಆಸಕ್ತರು ಬಂದರು. ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಅವರ ಉಪನ್ಯಾಸದಲ್ಲಿ ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದರು. ಉಪನ್ಯಾಸ ಕೇಳಿದ ಮೇಲೆ ಹಲವರು ಹೇಳಿದ್ದು..

1.ಮಂತ್ರ ಕಲಿಯೋಣ ಅಂತಾ ಬಂದೆ, ಜೀವನದ ಪಾಠ ಆರಂಭಿಸಿದ್ದಾರೆ. ನನಗಂತೂ ಆಶ್ಚರ್ಯವಾಗಿದೆ.

2.ವೇದಾಧ್ಯಯನ ಮಾಡುವವರು ಸತ್ಯವನ್ನೇ ಹೇಳಬೇಕು, ಅಹಿಂಸಾವಾದಿಗಳಾಗಿರಬೇಕು,.......ಯಾರೂ ವೇದಪಾಠದಲ್ಲಿ ಹೀಗೆ ಹೇಳಿಯೇ ಇರಲಿಲ್ಲ.

3. ಮನುಷ್ಯರೆಲ್ಲಾ ಒಂದೇ ಜಾತಿ! ಊಹಿಸಲೂ ಸಾಧ್ಯವಿಲ್ಲವಲ್ಲಾ!

4.ದೇವರ ಕಲ್ಪನೆಯೇ ವಿಭಿನ್ನ! ಪೂಜೆಯ ಕಲ್ಪನೆಯೇ ವಿಭಿನ್ನ! 33 ಕೋಟಿ ದೇವರು?

ವಿಶ್ವನಾಥಶರ್ಮರ ಉಪನ್ಯಾಸದ 5-10 ನಿಮಿಷಗಳ 5 ತುಣುಕುಗಳನ್ನು ಇಲ್ಲಿ ಕೇಳಿ.

ವೇದ ಪಾಠದ ಆಡಿಯೋ ಇಲ್ಲಿ ಕೇಳಿ
-ಹರಿಹರಪುರ ಶ್ರೀಧರ್.

ಮಂಗಳವಾರ, ಆಗಸ್ಟ್ 28, 2012

ವೇದ ಪಾಠ -1




     ವೇದಸುಧೆಗೆ ನಿನ್ನೆ ಒಂದು ವಿಶೇಷ ದಿನವೇ ಹೌದು.ಹಲವಾರು ದಿನಗಳಿಂದ ಬಯಸುತ್ತಿದ್ದ ವೇದಪಾಠ ಸಾಪ್ತಾಹಿಕ ತರಗತಿಯು   ನಿನ್ನೆ ಉದ್ಘಾಟನೆಯಾಗಿ ಇಂದು ಮೊದಲಪಾಠ ಶುರುವಾಯ್ತು. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಬಹಳ ವಿಶಿಷ್ಟವಾಗಿ ಆರಂಭಿಸಿದ ವೇದಪಾಠವು ಹಲವರಿಗೆ ಅಚ್ಚರಿಯುಂಟುಮಾಡಿತು. ವೇದ ಪಾಠ ಎಂದರೆ ಹೀಗೂ ನಡೆಯುತ್ತದೆಯೇ! ಎಂಬ ಆಶ್ಚರ್ಯ ಕೆಲವರಿಗೆ. ಕೆಲವರು ಕೇಳಿದರು" ಪೂಜೆಯ ಮಂತ್ರಗಳನ್ನು ಯಾವಾಗ ಹೇಳಿಕೊಡ್ತೀರಿ? ಬಹುಪಾಲು ಜನರಿಗೆ ವಿಶ್ವನಾಥಶರ್ಮರು ಪೀಠಿಕೆಯ ರೂಪದಲ್ಲಿ ಮಾಡಿದ ಉಪನ್ಯಾಸದಿಂದ "ಇಲ್ಲಿ ನಡೆಯುವ ವೇದ ಪಾಠವೆಂದರೆ ಕೇವಲ ಮಂತ್ರ ಕಲಿಯುವುದಲ್ಲ" ಎಂಬ ಅರಿವುಂಟಾಗಿದೆ.ವೇದಸುಧೆಯ ಅಭಿಮಾನಿಗಳು ಬಯಸುವುದಾದರೆ ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು  ಪ್ರತೀ ವಾರ ಇಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಫೀಡ್ ಬ್ಯಾಕ್ ಇದ್ದರೆ ಉತ್ತಮ

ಕೊಂಡಿಯಲ್ಲಿರುವ ಆಡಿಯೋ ಕ್ಲಿಪ್ ನಿಮಗೆ ಮೇಲ್ ಮಾಡಬೇಕೇ? ನನಗೊಂದು  ಮನವಿ ಮೇಲ್ ಕಳಿಸಿ.ಕೂಡಲೇ  ಮೇಲ್ ಮಾಡುವೆ.
.-ಹರಿಹರಪುರ ಶ್ರೀಧರ್.


ಪಾಠ-1  ಆಡಿಯೋ ಕ್ಲಿಪ್  ಇಲ್ಲಿ ಕೇಳಿ