ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ನವೆಂಬರ್ 24, 2011

ವೇದಾಂತವನ್ನು ಅಭ್ಯಸಿಸುವ ಮುನ್ನ

ಶ್ರೀ ಸೂರ್ಯ ಪ್ರಕಾಶ್ ಪಂಡಿತರು ಇಲ್ಲಿ ಆಡಿರುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬಹುದು.






-ಹರಿಹರಪುರ ಶ್ರೀಧರ್.

ಮಂಗಳವಾರ, ನವೆಂಬರ್ 22, 2011

'ಹೊಸಬೆಳಕು' ಮೂಡುತ್ತಿದೆ! -2

     ದಿನಾಂಕ 20-11-2011ರಂದು ಚಂದನ ದೂರದರ್ಶನದಲ್ಲಿ ಬೆ.9-30ಕ್ಕೆ  ಪ್ರಸಾರವಾದ 'ಹೊಸಬೆಳಕು' ಕಾರ್ಯಕ್ರಮವನ್ನು ಮಿತ್ರ ಹರಿಹರಪುರ ಶ್ರೀಧರರು ದ್ವನಿಮುದ್ರಿಸಿದ್ದು, ಅದನ್ನು ತಮ್ಮ ಶ್ರವಣಕ್ಕಾಗಿ ಇಲ್ಲಿ ಪ್ರಕಟಿಸಿದೆ.
ಅಭಿಪ್ರಾಯಗಳಿಗೆ ಸ್ವಾಗತ!
ಧ್ವನಿ: ಶ್ರೀ ಸುಧಾಕರ ಶರ್ಮ ಮತ್ತು ಶ್ರೀಮತಿ ವಿನಯಾಪ್ರಸಾದ್.

ಶುಕ್ರವಾರ, ನವೆಂಬರ್ 18, 2011

ಸಜ್ಜನರು ಯಾರು? - ಶ್ರೀ ಸೂರ್ಯಪ್ರಕಾಶ ಪಂಡಿತರ ಮಾತು

ಸಜ್ಜನರಾರು?  ಎಂಬ ಬಗ್ಗೆ ಬೆಂಗಳೂರಿನ ಚಿಂತಕ ಶ್ರೀ ಸೂರ್ಯ ಪ್ರಕಾಶ ಪಂಡಿತರ   ಮಾತುಗಳು ಇಲ್ಲಿವೆ.





******************
- ಹರಿಹರಪುರ ಶ್ರೀಧರ್.

ಶುಕ್ರವಾರ, ನವೆಂಬರ್ 11, 2011

'ಹೊಸಬೆಳಕು' ಮೂಡಲಿದೆ!


ವೇದಗಳ ಬಗ್ಗೆ 'ಹೊಸಬೆಳಕು' ಮೂಡಲಿದೆ!
     ಪುರಾತನವಾದ ವೇದದ ಕುರಿತು ಸಾಕಷ್ಟು ಆರೋಪ, ಅಪವಾದಗಳಿವೆ. ಅಪದ್ಧವಾಗಿ ಮಾತನಾಡುವ ಕೆಲವರು ವಿದ್ವಾಂಸರೆನಿಸಿಕೊಂಡವರು, ಕೆಲವರು ಕಾವಿಧಾರಿಗಳಿಂದಲೇ ವೇದಕ್ಕೆ ಕೆಟ್ಟ ಹೆಸರು ಬಂದಿದೆಯೆಂದರೆ ತಪ್ಪಾಗುವುದಿಲ್ಲ. ರೂಢಿಗತ ಕಲ್ಪನೆಗಳಿಗೆ ಹೊರತಾದ, ವೇದದ ನಿಜಮುಖವನ್ನು ಪರಿಚಯಿಸುವ ಒಂದು ವಿನೂತನ ಕಾರ್ಯಕ್ರಮ ದೂರದರ್ಶನದ ಚಂದನವಾಹಿನಿಯಲ್ಲಿ ಮೂಡಿಬರಲಿದೆ. ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರು ಮತ್ತು ವೇದಗಳ ಬಗ್ಗೆ ಸಾಕಷ್ಟು ಓದಿಕೊಂಡಿರುವ ಶ್ರೀಮತಿ ವಿನಯಾಪ್ರಸಾದ್ ರವರು ನಡೆಸಿಕೊಡಲಿರುವ ಈ ಕಾರ್ಯಕ್ರಮ ಸೋದರ-ಸೋದರಿಯರ ಸಂವಾದರೂಪದಲ್ಲಿದ್ದು ಇದೇ ದಿನಾಂಕ ೧೩-೧೧-೨೦೧೧ರಿಂದ ಪ್ರತಿ ಭಾನುವಾರ ಬೆಳಿಗ್ಗೆ ೯-೩೦ರಿಂದ ೧೦-೦೦ರವರೆಗೆ ೧೩ ಕಂತುಗಳಲ್ಲಿ ಮೂಡಿಬರಲಿದೆ. ಮೊದಲ ಕಂತಿನಲ್ಲಿ ವೇದವಿಜ್ಞಾನ ಮತ್ತು ಷೋಡಶೋಪಚಾರಗಳ ಕುರಿತು ಮಾಹಿತಿ ಕೊಡಲಿದ್ದಾರೆ. ಬ್ರೋಂಜ್ ಕಮ್ಯೂನಿಕೇಷನ್ಸ್ ಎಂಬ ಜಾಹಿರಾತು ಸಂಬಂಧಿ ಸಂಸ್ಥೆ ನಡೆಸುತ್ತಿರುವ ಶ್ರೀಯುತ ರಮೇಶ್ ಮತ್ತು ಸುರೇಶ್ ನಿರ್ಮಾಪಕರಾಗಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಪ್ರಾಯೋಜಕತ್ವ ಇಲ್ಲ. ವೇದಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಬೇಕು, ವಿಶೇಷವಾಗಿ ಯುವ ಪೀಳಿಗೆಗೆ ಸರಳವಾಗಿ ವೇದಗಳ ಮಹತ್ವ ತಿಳಿಸಿಕೊಡಬೇಕು ಎಂಬುದಷ್ಟೇ ಅವರ ಆಶಯವಾಗಿದೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಹಲವಾರು ಉಪನ್ಯಾಸಗಳನ್ನು ಕೇಳಿರುವ ನಾನು ಅವರಿಂದ ಪ್ರಭಾವಿತನಾದವರಲ್ಲಿ ಒಬ್ಬನಾಗಿದ್ದೇನೆ. ಈ ಕಾರ್ಯಕ್ರಮ ವಿನೂತನ ಹಾಗೂ ಚಿಂತನೀಯವಾಗಿರುವುದರಲ್ಲಿ ನನಗೆ ಅನುಮಾನವಿಲ್ಲ. ತಾವು ಈ ಕಾರ್ಯಕ್ರಮ ವೀಕ್ಷಿಸಬಹುದು. ಸಂದೇಹಗಳು, ಪ್ರಶ್ನೆಗಳು ಇದ್ದಲ್ಲಿ ಶ್ರೀ ಸುಧಾಕರಶರ್ಮರವರು ಉತ್ತರಿಸಲು ಸಿದ್ಧರಾಗಿದ್ದಾರೆ.



ಶುಕ್ರವಾರ, ಅಕ್ಟೋಬರ್ 7, 2011

ಕಲಿಯುತ್ತಾ ಕಲಿಸೋಣ - ಮಾತಾಜಿ ವಿವೇಕಮಯೀ





     ಕಳೆದ ವರ್ಷ ಹಾಸನಜಿಲ್ಲೆಯ ಚನ್ನರಾಯಪಟ್ಟಣದಲ್ಲಿ "ಗುರು ಚಿಂತನ " ಎಂಬ ಒಂದು ವಿನೂತನ ಕಾರ್ಯಕ್ರಮ. ಬೆಂಗಳೂರಿನ ಸಪ್ತಮಿ ಟ್ರಸ್ಟ್ ನವರು ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯೀ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಹಲವೆಡೆ ನಡೆಸುವ ಈ ಕಾರ್ಯಕ್ರಮದಲ್ಲಿ ಒಂದೆರಡು ಭಾರಿ ನಾನು ಭಾಗವಹಿಸಿರುವೆ. ಶಾಲಾ ಶಿಕ್ಷಕರ ಚೈತನ್ಯವನ್ನು ಜಾಗೃತಮಾಡುವ ಈ ಕಾರ್ಯಕ್ರಮಗಳು ಶಿಕ್ಷಕ ಸಮುದಾಯದ ಮೆಚ್ಚುಗೆ ಪಡೆದಿವೆ. ಶಿಕ್ಷಕರುಗಳಿಗಾಗಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಮಾತಾಜಿ ವಿವೇಕಮಯಿಯವರು  ಆಡಿರುವ ಮಾತುಗಳು ನಮಗೂ ಪ್ರೇರಣಾದಾಯಕವೇ ಆಗಿವೆ. 
-ಹರಿಹರಪುರ ಶ್ರೀಧರ್.