ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜೂನ್ 30, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -೫



ಸ್ವತಃ ಯಜುರ್ವೇಧ ಸ್ಪಷ್ಟವಾಗಿ ಸಾರುತ್ತಿದೆ:
ಯಥೇಮಾಂ ವಾಚಂ ಕಲ್ಯಾಣೇಮಾವದಾನಿ ಜನೇಭ್ಯಃ|
ಬ್ರಹ್ಮ ರಾಜನ್ಯಾಭ್ಯಾಂ ಶೂದ್ರಾಯ ಚಾರ್ಯಾಯ ಚ ಸ್ವಾಯ ಚಾರಣಾಯ ಚ|
ಪ್ರಿಯೋದೇವಾನಾಂ ದಕ್ಷಿಣಾಯೈ ದಾತುರಿಹನಭೂಯಾಸಮಯಂ
ಮೇ ಕಾಮಃ ಸಮೃಧ್ಯತಾಮುಪ ಮಾದೋ ನಮತು|| (ಯಜು.೨೬.೨)
ಸರ್ವಾಧಾರನಾದ ಸರ್ವಜ್ಞಾನ ಪ್ರಕಾಶಕನಾದ ಪರಮಾತ್ಮನು ಈ ಮಂತ್ರದ ಮೂಲಕ ಹೇಳುತ್ತಿದ್ದಾನೆ:
[ಇಹ] ಈ ಲೋಕದಲ್ಲಿ [ಯಥಾ ದೇವಾನಾಂ ದಕ್ಷಿಣಾಯೈ ದಾತುಃ ಭೂಯಾಸಂ] ನಾನು ವಿದ್ವಜ್ಜನರಿಗೂ, ಉದಾರಾತ್ಮರಿಗೂ ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ [ಇಮಾಂ ಕಲ್ಯಾಣೀಂ ವಾಚಂ] ಈ ಕಲ್ಯಾಣಕಾರಿಯಾದ ವಾಣೀಯನ್ನು [ಜನೇಭ್ಯಃ] ಮಾನವರೆಲ್ಲರ ಸಲುವಾಗಿ [ಬ್ರಹ್ಮರಾಜನಾಭ್ಯಾಂ] ಬ್ರಾಹ್ಮಣ ಕ್ಷತ್ರಿಯರಿಗಾಗಿ [ಶೂದ್ರಾಯ] ಶೂದ್ರನಿಗಾಗಿ [ಚ] ಮತ್ತು [ಆರ್ಯಾಯ] ವೈಶ್ಯನ ಸಲುವಾಗಿ [ಸ್ವಾಯ] ತನ್ನವನಿಗಾಗಿ [ಚ] ಅದೇ ರೀತಿ [ಅರಣಾಯ] ಬೇರೆಯವನ ಸಲುವಾಗಿ [ಅವದಾನಿ] ಉಪದೇಶಿಸುತ್ತೇನೆ. [ಅಯಂ ಮೇ ಕಾಮಃ] ಈ ನನ್ನ ಕಾಮನೆ [ಸಮೃಧ್ಯತಾಂ] ಸಮೃದ್ಧವಾಗಲಿ. [ಅದಃ] ಈ ಜಗತ್ತು [ಮಾ ಉಪನಮತು] ನನ್ನ ಬಳಿ ನಮ್ರವಾಗಿ ಬರಲಿ.
     ಈ ಮಂತ್ರ ಮಾನವ ಸಮಾಜದಲ್ಲಿ ವೇದಗಳ ಸ್ಥಾನವೇನೆಂಬುದನ್ನು, ಅವುಗಳ ಉದ್ದೇಶವೇನೆಂಬುದನ್ನು ತೆರೆನುಡಿಗಳಲ್ಲಿ ಉಸುರುತ್ತಿದೆ.
-ಪಂ. ಸುಧಾಕರ ಚತುರ್ವೇದಿ.

1 ಕಾಮೆಂಟ್‌: